ರೇಡಿಯೊ ಮಣಿಪಾಲ್ 90.4 Mhz-ಸಮುದಾಯ ಬಾನುಲಿ ಅರ್ಪಿಸುತ್ತಿದೆ ತುಳುವೆರೆ ಜಾಲ್ ಸರಣಿ ಕಾರ್ಯಕ್ರಮ. ಈ ಸಂಚಿಕೆ ಫೆಬ್ರವರಿ ತಿಂಗಳ ದಿನಾಂಕ 22ರಂದು ಮಂಗಳವಾರ ಸಂಜೆ ಸಮಯ 6.10ಕ್ಕೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಕಟಪಾಡಿ ಮಟ್ಟುವಿನಲ್ಲಿ ಆಚರಿಸಲಾಗುತ್ತಿರುವ ಕಂಗೀಲು ಸೇವೆಯ ಕುರಿತು ಗ್ರಾಮಸ್ಥರಾದ ರಾಜಶೇಖರ್,ಪಾಡ್ದನ ಕಲಾವಿದರಾದ ದಿನೇಶ್ ಮಟ್ಟು ಮತ್ತು ಶಶಿಕುಮಾರ್ ಅವರೊಂದಿಗೆ ಮಾತುಕತೆ ಪ್ರಸಾರವಾಗಲಿದೆ. ಫೆಬ್ರವರಿ 23 ರಂದು ಮಧ್ಯಾಹ್ನ 2.10ಕ್ಕೆ ಇದರ ಮರುಪ್ರಸಾರವಿರುವುದು.
ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal
ಮತ್ತು ಐಫೋನ್ ನ
https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್ಲೋಡ್ ಮಾಡಿ ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೊ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.