ವಸಂತ ಧಾರ್ಮಿಕ ಶಿಬಿರ ಉದ್ಘಾಟನೆ.

ಉಡುಪಿ ಪುತ್ತಿಗೆ ಮಠದಲ್ಲಿ ಶ್ರೀ ಸುಗುಣೇಂದ್ರ ತೀರ್ಥರ ಆದೇಶದಂತೆ ವಸಂತ ಧಾರ್ಮಿಕ ಶಿಬಿರ ಉದ್ಘಾಟನೆ ಗೊಂಡಿತು.

ದಿವಾನರಾದ ಶ್ರೀ ನಾಗರಾಜ ಆಚಾರ್ಯರು , ಶ್ರೀ ಪ್ರಸನ್ನ ಆಚಾರ್ಯ , ಹಾಗೂ ದಂಡ ತೀರ್ಥದ ಶ್ರೀ ಸೀತಾರಾಂ ಆಚಾರ್ಯರು ಉಪಸ್ಥಿತರಿದ್ದರು .

ಶ್ರೀ ಸೀತಾರಾಂ ಆಚಾರ್ಯರಿಂದ ಪ್ರಾಯೋಜಿತ ಗೊಂಡ. 10 ಶಿಬಿರಾರ್ಥಿಗಳಿಗೆ ಶ್ರೀಗಳವರ ಪರ್ಯಾಯದ ಬೃಹತ್ ಯೋಜನೆಯಾದ ಕೋಟಿ ಗೀತಾಲೇಖನದ ಪುಸ್ತಕವನ್ನು ವಿತರಿಸಲಾಯಿತು ಸುಮಾರು 60 ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಶಿಬಿರದ ಸಂಚಾಲಕರಾದ ಶ್ರೀ ಮಹಿತೋಷ ಆಚಾರ್ಯರು ಪ್ರಾಸ್ತಾವಿಕ ಮಾತಾಡಿ ಅತಿಥಿಗಳನ್ನು ಸ್ವಾಗತಿಸಿದರು. ಮತ್ತೋರ್ವ ಸಂಚಾಲಕರಾದ ಶ್ರೀ ರಮೇಶ್ ಭಟ್ ಕೆ ಧನ್ಯವಾದ ವಿತ್ತು ಕಾರ್ಯಕ್ರಮವನ್ನು ನಿರೂಪಿಸಿದರು..

 
 
 
 
 
 
 
 
 
 
 

Leave a Reply