ಕೊಳಲಗಿರಿ ಸೆಕ್ರೆಡ್ ಹಾರ್ಟ್ ಚರ್ಚ್ನಲ್ಲಿ ಮೊಂತಿ ಹಬ್ಬ (ತೆನೆ-ಹಬ್ಬ)ದ ಆಚರಣೆಯನ್ನು ವಿಜೃಂಭರಣೆಯಿಂದ ಆಚರಿಸಲಾಯಿತು. ಮಕ್ಕಳು ಮರಿಯಮ್ಮ ಅವರ ಗ್ರೋಟ್ಟೋ ಬಳಿ ಹೂವನ್ನು ಅರ್ಪಿಸಿದರು. ನಂತರದಲ್ಲಿ ಮಕ್ಕಳಿಗೆ ಹಾಗೂ ಇತರರಿಗೆ ಎರಡು ಬಾಗಗಳಾಗಿ ವಿಂಗಡಿಸಿ ಬಲಿಪೂಜೆಯನ್ನು ನೆರವೆಯಿಸಲಾಯಿತು.
ವಂದನೀಯ ಧರ್ಮಗುರುಗಳಾದ ಅನಿಲ್ ಪ್ರಕಾಶ್ ಕ್ಯಾಸ್ತಲಿನೋರವರು ಹಾಗೂ ವಂದನೀಯ ಧರ್ಮಗುರುಗಳಾದ ರೋಮನ್ ಮಸ್ಕರೇನ್ಹಸ್ ಬಲಿಪೂಜೆಯನ್ನು ನೆರವೇರಿಸಿದರು. ಹಬ್ಬದ ಪ್ರಾಯೋಜಕತ್ವವನ್ನು ನಿಖಿಲ್ ಸ್ಯಾಮ್ಯುವೆಲ್ಸ್ ಅವರ ಮೊಮ್ಮಕ್ಕಳಾದ ಜೋನ್ ಹಾಗೂ ಶಾರ್ಲೆಟ್ ಇವರು ವಹಿಸಿಕೊಂದಿದ್ದರು. ಭಕ್ತಾಧಿಗಳು ಉಪಸ್ಥಿತರಿದ್ದರು….