ಉಡುಪಿ: ವೈದ್ಯರ ದಿನಾಚರಣೆ , ವಾಯ್‌ಸ್‌ ಆಫ್ ಹೀಲಿಂಗ್ಸ್ : ಸಾಧಕರಿಗೆ ಅಭಿನಂದನೆ 

ಉಡುಪಿ, ಜು.1: ಉಡುಪಿ ಡೆಂಟಾಕೇರ್‌ನ ಮಾಲಕರಾದ ಡಾ ವಿಜಯೇಂದ್ರ ಅವರ ನೇತೃತ್ವದಲ್ಲಿ ವೈದ್ಯರ ದಿನಾಚರಣೆ ಪ್ರಯುಕ್ತ ‘ಮೈ ಮೆಲೋಡಿ ಡಾಟ್ ಇನ್’ ತಂಡದ ಐದನೇ ವರ್ಷಾಚರಣೆ ಪ್ರಯುಕ್ತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆೆ, ಕಿದಿಯೂರು ಹೊಟೇಲ್, ಐಎಂಎ, ಐಡಿಎ, ಆಯುಷ್, ಪ್ರಸಾದ್ ನೇತ್ರಾಾಲಯದ ಸಹಯೋಗದಲ್ಲಿ ‘ವಾಯ್‌ಸ್‌ ಆಫ್ ಹೀಲಿಂಗ್ಸ್’ ಕಾರ್ಯಕ್ರಮ ಕಿದಿಯೂರು ಹೊಟೇಲ್‌ನ ಶೇಷಶಯನ ಹಾಲ್‌ನಲ್ಲಿ ರವಿವಾರ ನಡೆಯಿತು.
ಮಣಿಪಾಲ ಟೆಕ್ನಾಾಲಜಿಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಗೌತಮ್ ಪೈ, ಮಾಹೆ ಸಹಕುಲಾಧಿಪತಿ ಡಾ ಎಚ್.ಎಸ್.ಬಲ್ಲಾಾಳ್, ಜಿ.ಶಂಕರ್ ಫ್ಯಾಾಮಿಲಿ ಟ್ರಸ್ಟ್  ಪ್ರವರ್ತಕ ಡಾ ಜಿ.ಶಂಕರ್ ಅವರಿಗೆ ಜೀವಮಾನಶೇಷ್ಠ ಪ್ರಶಸ್ತಿ  ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಕ ಕಸ್ತೂರ್ಬಾ ಆಸ್ಪತ್ರೆಯ  ಸಿಓಓ ಡಾ ಆನಂದ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಕಾಮತ್, ಕೆಎಂಸಿ ಡೀನ್ ಡಾ ಪದ್ಮರಾಜ ಹೆಗ್ಡೆೆ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈಯನ್‌ಸ್‌‌ನ ಡೀನ್ ಡಾ ಮೋನಿಕಾ ಸೊಲೋಮನ್, ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮೆಡಿಕಲ್ ಸುಪರಿಟೆಂಡೆಂಟ್ ಡೀನ್ ಡಾ ನಾಗರಾಜ್ ಎಸ್. ಹಾಗೂ  ವೈದ್ಯಕೀಯ ಪದ್ಧತಿಗೆ ಪೂರಕವಾಗಿ ಕೆಲಸ ನಿರ್ವಹಿಸಿದ ಸಮಾಜ ಸೇವಕರಾದ ನಿತ್ಯಾಾನಂದ ಒಳಕಾಡು, ಈಶ್ವರ ಮಲ್ಪೆ, ವಿಶು ಶೆಟ್ಟಿ  ಅಂಬಲಪಾಡಿ, ಇಕ್ಬಲ್ ಅಹಮ್ಮದ್ ಹಾಗೂ ರವಿರಾಜ್ ಎಚ್.ಪಿ.ಅವರನ್ನು ಸಮ್ಮಾಾನಿಸಲಾಯಿತು.

ಡಾ ಹರಿಪ್ರಸಾದ್ ಶೆಟ್ಟಿ , ಡಾ ರಮೇಶ್ ಶೆಟ್ಟಿ , ಡಾ ವಿಶ್ವಲತಾ ಸತೀಶ್, ಡಾ ರಾಧೆಶ್ಯಾಾಮ್, ಡಾ ಸಿಲ್ವೀನಿಯಾ ಎ.ಫೆರ್ನಾಂಡಿಸ್ ಅವರು ಮೋಸ್‌ಟ್‌ ಮೆಲೋಡಿಯಸ್ ವಾಯ್‌ಸ್‌ ಆಗಿ ಆಯ್ಕೆೆಯಾದರು.

ಎಂಎಲ್‌ಸಿ ಡಾ ಧನಂಜಯ ಸರ್ಜಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ , ಪ್ರಸಾದ್ ನೇತ್ರಾಾಲಯದ ವೈದ್ಯಕೀಯ ನಿರ್ದೇಶಕ ಡಾ। ಕೂಡ್ಲು ಕೃಷ್ಣಪ್ರಸಾದ್, ಉದ್ಯಮಿಗಳಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ , ಭುವನೇಂದ್ರ ಕಿದಿಯೂರು, ಸಾಯಿರಾಧಾ ಡೆವಲಪರ್ಸ್‌ನ ಪ್ರವರ್ತಕ ಮನೋಹರ ಎಸ್.ಶೆಟ್ಟಿ , ಜಿಲ್ಲಾ  ಆರೋಗ್ಯಾಾಧಿಕಾರಿ ಡಾ ಐ.ಪಿ.ಗಡಾದ್, ಐಎಂಎ ಉಪಾಧ್ಯಕ್ಷ ಡಾ ನವೀನ್ ಬಲ್ಲಾಳ್ , ಕಾರ್ಯದರ್ಶಿ ಅರ್ಚನಾ ಭಕ್ತ, ಖಜಾಂಚಿ ಡಾ| ಆಮ್ನ ಹೆಗ್ಡೆ , ಐಡಿಎ ಅಧ್ಯಕ್ಷ ಡಾ ಜಗದೀಶ್ ಜೋಗಿ, ಕಾರ್ಯದರ್ಶಿ ಡಾ ಅತುಲ್ ಯು., ಕೋಶಾಧಿಕಾರಿ ಡಾ ವಿಜೇಶ್ ಶೆಟ್ಟಿ , ಜಿಲ್ಲಾಾ ಆಯುಷ್ ಅಧ್ಯಕ್ಷ ಡಾ ಎನ್.ಟಿ.ಅಂಚನ್, ಕಾರ್ಯದರ್ಶಿ ಡಾ ಸತೀಶ್, ಕೋಶಾಧಿಕಾರಿ ಡಾ ಸಂದೀಪ್ ಸನಿಲ್, ಕಾರ್ಯಕ್ರಮದ ರುವಾರಿಗಳಾದ ಡಾ ಮನೋಜ್ ಮ್ಯಾಾಕ್ಸಿಿಮ್ ಡಿಲಿಮಾ, ಡಾ ಸತೀಶ್ ಶೆಟ್ಟಿ , ಡಾ ಜಗದೀಶ್, ಡಾ ವಿಜಯೇಂದ್ರ ಉಪಸ್ಥಿತರಿದ್ದರು. 
 
 
 
 
 
 
 
 
 
 
 

Leave a Reply