ವೇಗವಾಗಿ ಸಾಗುತ್ತಿದೆ ಅಂಬಾಗಿಲು ಪೆರಂಪಳ್ಳಿ ಮಣಿಪಾಲ ರಸ್ತೆ ಅಗಲೀಕರಣ ಕಾಮಗಾರಿ

ಉಡುಪಿ:  ಲೋಕೋಪಯೋಗಿ ಇಲಾಖೆ ವತಿಯಿಂದ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಟಿ ಡಿ ಆರ್ ಸಹಕಾರದೊಂದಿಗೆ ಚತುಷ್ಪಥ ಗೊಳ್ಳುತ್ತಿರುವ ಅಂಬಾಗಿಲು  ಪೆರಂಪಳ್ಳಿ ಮಣಿಪಾಲ ರಸ್ತೆ ಅಗಲೀಕರಣದ ಕಾಮಗಾರಿbÿಶಾಸಕ ಕೆ. ರಘುಪತಿ ಭಟ್ ಮಾರ್ಗದರ್ಶನದಲ್ಲಿ ವೇಗವಾಗಿ ಸಾಗುತ್ತಿದೆ. ಪ್ರಸ್ತುತ ರಸ್ತೆಯ ಮಧ್ಯ ಭಾಗದಿಂದ ತಲಾ 10 ಮೀಟರ್ ಮನೆ ,ಅಂಗಡಿ ಕಳೆದುಕೊಳ್ಳುವ ಭೂಮಾಲಕರ ಮನೆಗೆ ತೆರಳಿ ಲೋಕೋಪಯೋಗಿ ಇಲಾಖೆಯಿಂದ ನೀಡುವ ಕಟ್ಟಡ ಪರಿಹಾರದ ಅಧಿಕೃತ ಜ್ಞಾಪಕ ಪತ್ರ ನೀಡಲಾಯಿತು.

 ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ .ರಾಘವೇಂದ್ರ ಕಿಣಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಕೆ. ಎಸ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಭಟ್, ಸಹಾಯಕ ಅಭಿಯಂತರಾ ಸೋಮನಾಥ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಿಶೋರ್ ಕುಮಾರ್ ಕರಂಬಳ್ಳಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply