ಡಾ| ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ಪ್ರತಿ ವರ್ಷ ಪ್ರತಿಭಾವಂತ ಮಕ್ಕಳಿಗೆ ನೀಡುವ ಪ್ರಮಾ ಪ್ರಶಸ್ತಿ – 2022 ಕಾರ್ಯಕ್ರಮಕ್ಕೆ 5 ಮಕ್ಕಳನ್ನು ಆಯ್ಕೆಮಾಡಿದೆ.
ಸುಧಾ ಎಸ್ ಆಚಾರ್ಯ (ಸ್ತೋತ್ರ), ದಿಯಾ ಶೆಟ್ಟಿ (ಪಾಕ ಶಾಸ್ತç), ಪೂರ್ವಿಕಾ (ನೃತ್ಯ), ಮಾಧವ ಉರಾಳ (ಗಣಿತ), ಪ್ರದ್ಯುಮ್ನ ಪಿ. ರಾವ್ (ವೀಣೆ) ಇವರನ್ನು ಪ್ರಮಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ನವಂಬರ್ 20 ರಂದು ಮಣಿಪಾಲದ ಮಣಿಪಾಲ್ ಡಾಟ್ನೆಟ್ ಸಭಾಂಗಣದಲ್ಲಿ ಸಂಜೆ 4.00 ಘಂಟೆಗೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸ್ತೂರ್ಬಾ ಆಸ್ಪತ್ರೆ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ| ಶ್ರೀಕಿರಣ್ ಹೆಬ್ಬಾರ್ ಹಾಗೂ ಮುಖ್ಯ ಅತಿಥಿಯಾಗಿ ಹಿರಿಯ ಸಂಗೀತ ವಿದ್ವಾಂಸರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಮಧೂರು ಪಿ. ಬಾಲಸುಬ್ರಮಣ್ಯಂ ಅವರು ಭಾಗವಹಿಸಲಿದ್ದಾರೆ ಎಂದು ವಿದುಷಿ ಪವನ ಬಿ. ಆಚಾರ್ ಟ್ರಸ್ಟ್ನ ಪರವಾಗಿ ತಿಳಿಸಿರುತ್ತಾರೆ.
ಸಂಪರ್ಕ: 9448689878