ಡ್ಯೂಡ್ ಮೆನ್ಸ್ ವೇರ್ ನ ನಾಲ್ಕನೇ ಶಾಖೆ ಮಣಿಪಾಲ್ ನಲ್ಲಿ ಉದ್ಘಾಟನೆ

ದಿನಾಂಕ 30/06/24 ಆದಿತ್ಯವಾರ ಡ್ಯೂಡ್ ಮೆನ್ಸ್ ವೇರ್ ಬಟ್ಟೆ ಅಂಗಡಿ ನಾಲ್ಕನೇ ಶಾಖೆ ಮಣಿಪಾಲ್ ನಲ್ಲಿ ಉದ್ಘಾಟನೆ ನಡೆಯಿತು. 

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ಎಚ್ . ಸದಾನಂದ ಪೂಜಾರಿ ಅವರು ಉದ್ಘಾಟನೆ ನಡೆಸಿದರು. ಪೆರ್ಡೂರು ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಸಾಲಿಯಾನ್, ಉಡುಪಿಯನ್ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಸಚಿನ್ ಪೂಜಾರಿ, ಮಣಿಪಾಲ್ ರಿಕ್ಷಾ ಯೂನಿಯನ್ ಅಧ್ಯಕ್ಷರಾದ ವಿಜಯ ಪುತ್ರನ್, ಮಧುವನ ಕಾಂಪ್ಲೆಕ್ಸ್ ಮಾಲಕರಾದ ಶ್ಯಾಮ್ ಪೂಜಾರಿ, ಯುವ ಉದ್ಯಮಿ ಬೈಕಾಡಿ ಧೀರಜ್ ಕುಮಾರ್ ಶೆಟ್ಟಿ, ಟೀಮ್ ಭಗ್ವ ಅಧ್ಯಕ್ಷರಾದ ದೀಪಕ್ ಮೂಡುಬೆಳ್ಳೆ, ಮಾಲಕರಾದ ಹನೀಫ್, ದೀಕ್ಷಿತ್ ಪೂಜಾರಿ, ಕಿಶೋರ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು. 

ಇಲ್ಲಿನ ವಿಶೇಷತೆ ಏನೆಂದರೆ ಯಾವುದೇ ಶರ್ಟ್ ಗೆ 300 ರೂ., ಜೀನ್ಸ್ ಪ್ಯಾಂಟ್ ಗೆ 500 ರೂ., ಕಾಟನ್ ಪ್ಯಾಂಟ್ ಗೆ 400 ರೂ., ಟಿ-ಶರ್ಟ್ ಗೆ 150 ರೂ., ಹಾಗೂ ಇನ್ನಿತರ ಬಟ್ಟೆಗಳು ತುಂಬಾ ಕಡಿಮೆ ದರದಲ್ಲಿ ಲಭ್ಯವಿದೆ. ಇದರ ಮೊದಲ ಶಾಖೆ ಬ್ರಹ್ಮಾವರದ ಮಧುವನ ಕಾಂಪ್ಲೆಕ್ಸ್ ನಲ್ಲಿ, ಎರಡನೇ ಶಾಖೆ ಕುಂದಾಪುರದ ಸರ್ಜನ್ ಹಾಸ್ಪಿಟಲ್ ಎದುರುಗಡೆ ಇದೆ. ಸುಮಾರು 10 ವರ್ಷದಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುತ್ತಾ ಬಂದಿದೆ.

 
 
 
 
 
 
 
 
 
 
 

Leave a Reply