ಉಡುಪಿ- ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು
ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು,
ಇಲ್ಲಿನ ಐಕ್ಯೂಎಸಿ ಕ್ನನಡ ವಿಭಾಗ, ಗ್ರಂಥಾಲಯ ಮತ್ತು ಉಡುಪಿ
ಮಾಹಿತಿ ಕೇಂದ್ರ ಜಂಟಿ ಸಹಯೋಗದಲ್ಲಿ ರಾಷ್ಟ್ರೀಯ
ಗ್ರಂಥಾಲಯ ಸಪ್ತಾಹ – ೨೦೨೨ರ ಉದ್ಘಾಟನೆ, ಪುಸ್ತಕ ಪ್ರದರ್ಶನ
ಮತ್ತು ರಾಜಾರಾಮ್ ಮೋಹನ್ ರಾಯ್ ರವರ 250 ನೇ ಜನ್ಮ
ದಿನೋತ್ಸವ ಪ್ರಯುಕ್ತ ಮಹಿಳಾ ಸಬಲೀಕರಣ ವಿಶೇಷ ಉಪನ್ಯಾಸ
ಕಾಲೇಜು ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಡಾ. ಅಶೋಕ ಕಾಮತ್, ಉಪ ಪ್ರಾಂಶುಪಾಲರು ಜಿಲ್ಲಾ ಶಿಕ್ಷಣ
ಮತ್ತು ತರಬೇತಿ ಸಂಸ್ಥೆ ಉಡುಪಿ ಕಾರ್ಯಕ್ರಮವನ್ನು ಉದ್ಘಾಟಿಸಿ
ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಮತ್ತು ವ್ಯಕ್ತಿತ್ವ ವಿಕಸನ
ಕುರಿತು ವಿಶೇಷ ಉಪನ್ಯಾಸ ನೀಡಿ ವಿದ್ಯಾರ್ಥಿಗಳು ತಲೆ ತಗ್ಗಿಸಿ ಪುಸ್ತಕ
ಓದುವುದನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ತಲೆ ಎತ್ತಿ
ಬದುಕುವುದನ್ನು ಕಲಿಸಿ ಕೊಡುತ್ತದೆ. ಬಾಹ್ಯ ಶಿಸ್ತು ಎಷ್ಟು
ಮುಖ್ಯನೋ ಆಂತರಿಕ ಶಿಸ್ತುಕೊಡ ಅಷ್ಟೇ ಮುಖ್ಯ, ಪುಸ್ತಕ
ಓದುವ ಹವ್ಯಾಸ ಒಬ್ಬ ವ್ಯಕ್ತಿಯಲ್ಲಿ ಆಂತರಿಕ ಶಿಸ್ತನ್ನು
ಬೆಳೆಸುತ್ತದೆ. ಬದಲಾವಣೆ ಜಗದ ನಿಯಮವೆಂಬoತೆ ಉತ್ತಮ
ಪುಸ್ತಕ ಓದುವಿನಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ಚಿಂತನೆ
ಆಲೋಚನೆ ಹುಟ್ಟಿಕೊಳ್ಳತ್ತದೆ. ಎಂದರು.
ಡಾ. ರಾಮದಾಸ ಪ್ರಭು, ಸಹ ಪ್ರಾಧ್ಯಾಪಕರು ಇತಿಹಾಸ
ವಿಭಾಗ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು
ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇವರು
ಮಹಿಳಾ ಸಬಲೀಕರಣ ವಿಶೇಷ ಉಪನ್ಯಾಸವನ್ನು ನೀಡಿ,
ಆಧುನಿಕತೆಯ ಒಳಿತುಗಳನ್ನು ಮತ್ತು
ಸಾಂಪ್ರದಾಯಿಕತೆಯ ಒಳಿತುಗಳನ್ನು ಸೇರಿಸಿ ಭಾರತದ
ಮಹಿಳೆಯರಿಗೆ ಒಂದು ಭವಿಷ್ಯ ಕಟ್ಟುವ ಮೊದಲ ಪ್ರಯತ್ನ
ಮಾಡಿದವರು ರಾಜಾ ರಾಮ್ ಮೋಹನ್ ರಾಯ್ ಭಾರತದ ಮೊದಲ
ಪುರುಷ ಮಹಿಳಾವಾದಿಯಾಗಿ ಸಮಾಜ ಸುಧಾರಣೆಯ ಕೆಲಸ
ಮಾಡಿದರು. ಸತಿ ಪದ್ಧತಿ, ಬಾಲ್ಯ ವಿವಾಹ ಇತ್ಯಾದಿ ಸಾಮಾಜಿಕ ಅನಿಷ್ಟ
ಪದ್ಧತಿಗಳನ್ನು ವಿರೋಧಿಸಿ ಮಹಿಳೆಯರ ವಿಧ್ಯಾಭ್ಯಾಸ, ವಿಧವಾ ಪುನರ್ ವಿವಾಹಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದರು ಎಂದರು.
ಡಾ.ಭಾಸ್ಕರ್ ಶೆಟ್ಟಿ ಎಸ್ ಪ್ರಾಂಶುಪಾಲರು ಅಧ್ಯಕ್ಷತೆ
ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿ ಡಾ. ವಾಣಿ ಆರ್ ಬಲ್ಲಾಳ್
ಮತ್ತು ಗ್ರಂಥಪಾಲಕಿ ಶ್ರೀಮತಿ ಯಶೋದಾ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನಿಕೇತನ ಸ್ವಾಗತಿಸಿ
ಪ್ರಸ್ತಾವನೆಗೈದರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕರು
ಡಾ. ರವಿರಾಜ ಶೆಟ್ಟಿ ವಂದಿಸಿದರು. ಕು. ಅಮೃತ ದ್ವಿತೀಯ ಬಿ.ಎ ವಿದ್ಯಾರ್ಥಿನಿ
ಕಾರ್ಯಕ್ರಮ ನಿರೂಪಿಸಿದರು.
![](https://karavalixpress.com/wp-content/uploads/2024/07/WhatsApp-Image-2024-07-14-at-6.54.03-PM.jpeg)
![](https://karavalixpress.com/wp-content/uploads/2024/07/adarsha.jpg)
![](https://karavalixpress.com/wp-content/uploads/2024/07/gandhi-hospital.jpg)
![](https://karavalixpress.com/wp-content/uploads/2024/07/Inchara.jpg)
![](https://karavalixpress.com/wp-content/uploads/2024/07/newcity.jpg)
![](https://karavalixpress.com/wp-content/uploads/2024/07/Prasad-netralaya.jpg)
![](https://karavalixpress.com/wp-content/uploads/2024/04/satyanath-ad.jpeg)
![](https://karavalixpress.com/wp-content/uploads/2023/11/WhatsApp-Image-2023-11-10-at-6.56.43-PM-300x300.jpeg)
![](https://karavalixpress.com/wp-content/uploads/2024/01/WhatsApp-Image-2024-01-13-at-12.44.55-PM.jpeg)