ಕರ್ಣಾಟಕ ಬ್ಯಾಂಕ್ ಕುಂಜಿಬೆಟ್ಟು ಶಾಖೆ- 45ನೇ ವಾರ್ಷಿಕೋತ್ಸವ

ದಿನಾಂಕ 01.12.2022 ಉಡುಪಿ ಕುಂಜಿಬೆಟ್ಟು ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ.ಬಿ.ರಾಜಗೋಪಾಲ್,AGM ಪ್ರಾದೇಶಿಕ ಕಛೇರಿ ಉಡುಪಿ,ಹಾಗೂ ಮುಖ್ಯ ಅತಿಥಿಗಳಾದ Dr.P.L.N Rao ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಶಾಖೆಯ ಮೊದಲ ಗ್ರಾಹಕರನ್ನು ಸನ್ಮಾನಿಸಲಾಯಿತು.ಶಾಖಾ ಪ್ರಬಂಧಕರಾದ ಶ್ರೀಯುತ ಶ್ರೀ ಹರ್ಷ vಇವರು ಬಂದ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಭಾಗ್ಯಶ್ರೀ ಅವರು ನಿರ್ವಹಿಸಿದರು. ಉಪಸ್ಥಿತರಿದ್ದ ಗ್ರಾಹಕರು, ಶಾಖೆಯ ಸಿಬ್ಬಂದಿ ವರ್ಗದವರಾದ ಪ್ರಶಾಂತ್, ಗಣೇಶ್, ಸುಪ್ರೀತ್, ವಿಜೇತ, ನಿರ್ಮಲ, ಆಶಾ,ರಮೇಶ್ ರವರ ಸೇವೆಯನ್ನು ಶ್ಲಾಘಿಸಿದರು.ಉಡುಪಿ ವಲಯದ ಚೀಫ್ ಮೆನೇಜರ್ ರವರಾದ ಶ್ರೀಯುತ ಅರುಣ್ T R ಹಾಗೂ ಶ್ರೀಯುತ ವಿಶ್ವನಾಥ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply