ಅಪಘಾತದ ಗಾಯಾಳುವನ್ನು ರಕ್ಷಿಸಿ, ಆಸ್ಪತ್ರೆ ಸಾಗಿಸಲು ನೆರವಾದ ಸಚಿವ ಸುನಿಲ್ ಕುಮಾರ್

ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರ ಮಾನವೀಯತೆಯ ಕಾರ್ಯಶೈಲಿ ಆಗೊಮ್ಮೆ ಈಗೊಮ್ಮೆ ಸಾಬೀತು ಆಗುತ್ತಲೆ ಇರುತ್ತದೆ. ಈ ಹಿಂದೆ ಅನೇಕ ಬಾರಿ ಅವರ ಅಂತರಂಗದ ಮಾನವೀಯ ಗುಣ ಪ್ರದರ್ಶನಗೊಂಡಿದ್ದನ್ನು ನಾವು ಕಂಡಿದ್ದೇವೆ.
ಬುಧವಾರ ಕೂಡ ಅಂತದ್ದೆ ಒಂದುಯ ಘಟನೆ ಸಚಿವರಿಂದ ನಡೆದಿದ್ದು ಅದು ಸಾರ್ವಜನಿಕ ಮೆಚ್ಚುಗಗೆ ಕಾರಣವಾಗಿದೆ.

ಬುಧವಾರ ಸಂಜೆ ಬೈಪಾಸ್ ಬಳಿ ದ್ವಿಚಕ್ರ ವಾಹನ ಅಪಘಾತ ಸಂಭವಿಸಿತ್ತು., ಇಂಧನ ಸಚಿವ ವಿ. ಸುನಿಲ್ ಕುಮಾರ್ ಅದೇ ಮಾರ್ಗಸಲ್ಲಿ ತೆರಳುತಿದ್ದರು‌ ಅಪಘಾತದ ಗಾಯಾಳುವನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.
ನಗರದ ಕೃಷ್ಣಗಿರಿ ಬಳಿ ಘಟನೆ ನಡೆದಿರುವುದು. ಸ್ಕೂಟಿಯೊಂದನ್ನು ಚಲಾಯಿಸುತಿದ್ದ ವ್ಯಕ್ತಿ ರಸ್ತೆ ಬದಿಯ ಕಲ್ಲಿಗೆ ವಾಹನ ಸಮೇತ ಡಿಕ್ಕಿ ಹೊಡೆದಿದ್ದಮ ಪರಿಣಾಮ ಸವಾರ ಗಾಯಗೊಂಡಿದ್ದು ಅದೇ ಸಮಯದಲ್ಲಿ ಸಚಿವರು ರಕ್ಷಣೆಗೆ ಮುಂದಾದರು. ಗಾಯಾಳುವನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು.
ಈ ವೇಳೆ ಸಚಿವರ ಕಚೇರಿ ಸಿಬ್ಬಂದಿ ಶಶಿಕಾಂತ್ ರೆಂಜಾಳ, ಭದ್ರತಾ ಸಿಬಂದಿ ಪ್ರಭಾಕರ್, ಹರೀಶ್ ಅಂಚನ್ ಗಾಯಾಳುಗೆ ನೆರವಾಗುವಲ್ಲಿ ಸಹಕರಿಸಿದ್ದಾರೆ. ಸಚಿವರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

 
 
 
 
 
 
 
 
 
 
 

Leave a Reply