ಯುಏನ್ ಐ ಫೌಂಡೇಶನ್ ಅಂಗಸಂಸ್ಥೆ, ಆಸರೆಯ ಬೆಳಕು ವತಿಯಿಂದ ಮೂರು ದಿನಗಳ ಉಚಿತ ಅಯುಷ್ಮಾನ್ ಅರೋಗ್ಯ ಕಾರ್ಡ್ ದಾಖಲಾತಿ ಶಿಬಿರವು ಉದ್ಯಾವರ ಸೌಂದರ್ಯ ಕಾಂಪ್ಲೆಕ್ಸ್ ನಲ್ಲಿ ಜರಗಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ನಯನ ಗಣೇಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಕಾಪು ಕ್ಷೇತ್ರ ಕಾರ್ಯದರ್ಶಿ ರಾಜೇಶ್ ಕುಂದರ್, ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ರವಿ ಸಾಲ್ಯಾನ್, ಕಾಪು ಯುವ ಮೋರ್ಚಾ ಅಧ್ಯಕ್ಷ ಸಚಿನ್ ಪಿತ್ರೋಡಿ ಉಪಸ್ಥಿತರಿದ್ದರು