ಶ್ರೀ ಶಾಂತಿಮತೀ ಪ್ರತಿಷ್ಠಾನ (ರಿ.) ಹಮ್ಮಿ ಕೊಂಡ ಸಾಧಕರೆಡೆ – ನಮ್ಮನಡೆ ಕಾರ್ಯಕ್ರಮದಲ್ಲಿ ಖ್ಯಾತ ಹರಿಕಥಾ ಶಿರೋ ಮಣಿ, ವಾಗ್ಮಿ, ಸಂಪನ್ಮೂಲ ವ್ಯಕ್ತಿ , ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಯುತ ಬಿ. ಸಿ.ರಾವ್ ಶಿವಪುರ ಇವರನ್ನು ಗೌರವಿಸ ಲಾಯಿತು.
ಶಿವಪುರದ ಶ್ರೀಯುತರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗಣೇಶ ಅಡಿಗ , ರಾಘವೇಂದ್ರ ರಾವ್ , ಆದರ್ಶರಾವ್ ಉಪಸ್ಥಿತರಿದ್ದರು.
ಉಮೇಶ ಬಾಯರಿ ಸ್ವಾಗತಿಸಿ, ವಿದ್ವಾನ್ ಡಾ| ವಿಜಯ ಮಂಜರ್ ಪ್ರಸ್ತಾವನೆಗೈದರು. ಪ್ರಸನ್ನ ಭಟ್ ಧನ್ಯವಾದವಿತ್ತರು. ಸಂಸ್ಥೆಯ ಅಧ್ಯಕ್ಷ ದಯಾನಂದ ವಾರಂಬಳ್ಳಿ ಕಾರ್ಯ ಕ್ರಮ ನಿರೂಪಿಸಿದರು.