Janardhan Kodavoor/ Team KaravaliXpress
33.6 C
Udupi
Monday, March 20, 2023
Sathyanatha Stores Brahmavara

ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ) ವಡ್ಡರ್ಸೆಯ ದಶಮಾನೋತ್ಸವ ಪ್ರಯುಕ್ತ ಕರಪತ್ರ ಹಾಗೂ ಪೋಸ್ಟರ್ ಬಿಡುಗಡೆ

ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ) ವಡ್ಡರ್ಸೆ..ಇವರ ದಶಮಾನೋತ್ಸವ ಕಾರ್ಯಕ್ರಮವು ಫೆಬ್ರವರಿ 26 ರಂದು ನಡೆಯಲಿದ್ದು ಇದರ ಅಂಗವಾಗಿ ‌ಈ ದಿನ ದೇವಸ್ಥಾನದಲ್ಲಿ ಕಲಾರಂಗದ ನೂತನ ಲೋಗೋ, ಕರಪತ್ರ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ನೆರವೇರಿತು.

ಬಳಿಕ‌ ಕಲಾರಂಗದ ಗುರುಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟುರವರು ” ಕಲಾರಂಗವು ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತನ್ನದೇ ರೀತಿಯಲ್ಲಿ ಶ್ರಮಿಸುತ್ತಿದ್ದು ಪ್ರಬುದ್ದ ಕಲಾವಿದರಿಂದ ಕೂಡಿದ ತಂಡವಾಗಿದೆ.ಹಲವು ಹೊಸತನದ ವಿನೂತನ ಪ್ರಯೋಗಗಳ ಮೂಲಕ ಎಲ್ಲರ‌ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ” ಹೇಳಿದರು.

 

ದೇವಸ್ಥಾನದ ಆಡಳಿತ ಮುಕ್ತೇಸರರಾದ ಕೊತ್ತಾಡಿ‌ ಉದಯ್ ಕುಮಾರ್‌‌ಶೆಟ್ಟಿಯವರು ಕಲಾರಂಗದ ಮುಂದಿನ‌ ದಶಮಾನೋತ್ಸವ ‌ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.. ಈ ಸಂದರ್ಭದಲ್ಲಿ ಭಜನಾ ಮಂಡಳಿ ಹಾಗೂ ಕಲಾರಂಗ ಸದಸ್ಯರು,ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು‌ ,ಹಾಗೂ ಆಹ್ವಾನಿತ ಹವ್ಯಾಸಿ ಕಲಾತಂಡದ ಸದಸ್ಯರು ಉಪಸ್ಥಿತರಿದ್ದರು..

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!