ಮುದ್ದು ಕೃಷ್ಣ ಛಾಯಾಚಿತ್ರ ಸ್ಪರ್ಧೆ-2020

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಪ್ರಾಯೋಜಕತ್ವದಲ್ಲಿ ಸೌತ್ ಕೆನರಾ ಪೋಟೋಗ್ರಾಪರ್ಸ್ ಅಸೋಶಿಯೇಶನ್ ಉಡುಪಿ ವಲಯ ಮತ್ತು “ಸುಮನಸಾ” ಕೊಡವೂರು(ರಿ.) ಇವರ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ  “ಮುದ್ದು ಕೃಷ್ಣ ಛಾಯಾಚಿತ್ರ ಸ್ಪರ್ಧೆ-2020” ನಡೆಯಲಿದೆ.
 ಸ್ಪರ್ಧೆಯ ನಿಯಮಗಳು :
೧. ಮಗುವಿನ ಫೋಟೋ “6*9” ಅಳತೆಯಲ್ಲಿರಬೇಕು
೨. ಕಳುಹಿಸಿಕೊಡಲು “6*9” ಅಳತೆಯ ಮೂರು ಫೋಟೋ ಮಾತ್ರ
೩. ಫೋಟೋದ ಹಿಂದೆ ಮಗುವಿನ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ದೂರವಾಣಿ ಸಂಖ್ಯೆ ನಮೂದಿಸತಕ್ಕದ್ದು.  ಜನ್ಮ ದಿನಾಂಕದ ದಾಖಲೆಯ ನಕಲು ಪ್ರತಿ ಜೊತೆಗಿರಲಿ
೪. ಹಳೆಯ ಛಾಯಾಚಿತ್ರಗಳಿಗೆ ಅವಕಾಶವಿಲ್ಲ (ಈ ಬಾರಿ ಕ್ಲಿಕ್ಕಿಸಿದ ಛಾಯಾಚಿತ್ರ ಮಾತ್ರ ಸ್ಪರ್ಧೆಗೆ ಅರ್ಹ)
೫. ಮೊಬೈಲ್‌ನಿಂದ ತೆಗೆದ ಫೋಟೋವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ, ತೀರ್ಪುಗಾರರ ನಿರ್ಧಾರವೇ ಅಂತಿಮ
೬. ಫೋಟೋ ಕಳುಹಿಸಲು ಕೊನೆಯ ದಿನಾಂಕ: 05-09-2020
ವಿಭಾಗ:
೧. 2 ವರ್ಷದವರೆಗೆ , 2ರಿಂದ 5 ರವರೆಗೆ, ಹಾಗೂ 5 ರಿಂದ 8 ರವರೆಗಿನ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
೨. ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ  ಹಾಗೂ ಎರಡು ಸಮಾಧಾನಕರ ಬಹುಮಾನವಿರುತ್ತದೆ.
೩. ಪ್ರತಿ ವಿಭಾಗದಲ್ಲಿ:- ಪ್ರಥಮ: 1,000.00- ನಗದು, ಪ್ರಮಾಣ ಪತ್ರ, ಆಕರ್ಷಕ ಸ್ಮರಣಿಕೆ ಹಾಗು ಗಿಫ್ಟ್ ವೋಚರ್
 ೪. ದ್ವಿತೀಯ : 500.00- ನಗದು, ಪ್ರಮಾಣ ಪತ್ರ, ಆಕರ್ಷಕ ಸ್ಮರಣಿಕೆ ಹಾಗೂ ಗಿಫ್ಟ್ ವೋಚರ್
 ೫. ತೃತೀಯ : 250.00- ನಗದು, ಪ್ರಮಾಣ ಪತ್ರ, ಆಕರ್ಷಕ ಸ್ಮರಣಿಕೆ ಹಾಗೂ ಗಿಫ್ಟ್ ವೋಚರ್
೬. ಪ್ರತಿ ವಿಭಾಗದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಿತ ಛಾಯಾಚಿತ್ರವನ್ನು ಕ್ಲಿಕ್ಕಿಸಿದ ವೃತ್ತಿಪರ ಛಾಯಾಗ್ರಾಹಕರಿಗೂ ವಿಶೇಷ ನಗದು ಬಹುಮಾನ ಹಾಗು ಸ್ಮರಣಿಕೆ ನೀಡಲಾಗುವುದು
 (ವೃತ್ತಿಪರ ಛಾಯಾಚಿತ್ರಗಾರರಿಂದಲೇ ನಿಮ್ಮ ಮಕ್ಕಳ ಛಾಯಾಚಿತ್ರ ತೆಗೆಸಿ ಶ್ರೀಕೃಷ್ಣ ಜನ್ಮಾಷ್ಠಮಿಯ ಸಂಭ್ರಮವನ್ನು ಇಮ್ಮಡಿಗೊಳಿಸಿ)
ಬಹುಮಾನ ವಿತರಣೆ 11-09-2020, ಸಂಜೆ ಗಂಟೆ 5.00ಕ್ಕೆ ಸ್ಥಳ: ಕೊಡವೂರು ದೇವಸ್ಥಾನ
ಫೋಟೋ ಕಳುಹಿಸ ಬೇಕಾದ ವಿಳಾಸ
* ಶ್ಯಾಡೋಸ್ ಡಿಜಿಟಲ್ ಕ್ರಿಯೇಷನ್ ಕಸ್ತೂರಿ ಬಿಲ್ಡಿಂಗ್ 2ನೇ ಮಹಡಿ, ಶಿರಿಬೀಡು, ಉಡುಪಿ ಅಥವಾ
* ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು
ಹೆಚ್ಚಿನ ಮಾಹಿತಿಗಾಗಿ:   9448252363, 9880953649, 7204146368, 9880058665
ಈ ಸ್ಪರ್ಧೆಯ ಮಾಧ್ಯಮ ಪಾಲುದಾರರಾಗಿ karavalixpress.com  ಕೈ ಜೋಡಿಸಲಿದೆ 
 
 
 
 
 
 
 
 
 
 
 

Leave a Reply