ಒಂದು ಉತ್ತಮ ಸಂಸ್ಕಾರಯುಕ್ತ ಮತ್ತು ಧಾರ್ಮಿಕ – ಸಾಂಸ್ಕೃತಿಕ ಸಂವೇದನಾಶೀಲ ಮನಸ್ಸುಗಳ ಮೂಸೆಯಲ್ಲಿ ಅದೇನೆಲ್ಲ ಸುಂದರ ಕಲ್ಪನೆಗಳು ಅರಳಬಲ್ಲವು ಅನ್ನೋದಕ್ಕೆ ಇದು ಮತ್ತೊಂದು ಉದಾಹರಣೆಯಾಗಬಹುದು ಅನ್ಸುತ್ತೆ.
ಉಡುಪಿಯ ಶ್ರೀ ಹರೀಶ್ ಆಚಾರ್ಯರು ತಮ್ಮ ಸಾರ್ಥಕ ಜೀವನದ ಅರುವತ್ತು ವಸಂತಗಳನ್ನು ಪೊರೈಸಿದ ಸದವರಸರದಲ್ಲಿ ಒಂದು ಉತ್ತಮ ಕಾರ್ಯಮಾಡಿ ಗಮನಸೆಳೆದಿದ್ದಾರೆ.
ಜನವರಿ 28, ಉಡುಪಿ ನೀಲಾವರದ ಗೋಶಾಲೆ ಯಲ್ಲಿ ತಮ್ಮ ಮನೆಮಂದಿ ಇಷ್ಟಮಿತ್ರರು ಹಾಗೂ ಬಂಧುಗಳೊಡನೆ ತೆರಳಿ ಸುಮಾರು ಎರಡು ಲಕ್ಷ ರೂ ಗಳಷ್ಟು ವೆಚ್ಚದಲ್ಲಿ ವಿವಿಧ ಬಗೆಯ ಹಿಂಡಿ ಗಳನ್ನು , ಕುಚ್ಚಿಗೆ ಅಕ್ಕಿ ಬೆಲ್ಲದೊಂದಿಗೆ ಮಿಶ್ರಣ ಮಾಡಿ ಪಾಯಸದ ರೂಪದಲ್ಲಿ ಸಿದ್ಧಪಡಿಸಿ ಅಲ್ಲಿರುವ ಒಂದೂವರೆ ಸಾವಿರಕ್ಕೂ ಅಧಿಕ ಗೋವುಗಳಿಗೆ ಯಥೇಚ್ಛ ಉಣಬಡಿಸಿ ಮನಸಾ ಸಂತೋಷ ಪಟ್ಟಿದ್ದಾರೆ.
ಈ ಮುಖೇನ ತಮ್ಮ ಷಷ್ಠ್ಯಬ್ದಿಯನ್ನು ಅರ್ಥ ಪೂರ್ಣವಾಗಿ ಆಚರಿಸಿಕೊಂಡು ಮಾದರಿ ಯಾಗಿದ್ದಾರೆ.
ಗೋಶಾಲೆಯ ಮುಖ್ಯಸ್ಥರೂ ,ಶ್ರೀ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು ಚಿತ್ತೈಸಿ ಈ ಸತ್ಕರ್ಮಕ್ಕೆ ಚಾಲನೆ ನೀಡಿ ಹರಸಿದರು .
ಗೋಸೇವೆಯ ಬಳಿಕ ಆಗಮಿಸಿದ ಎಲ್ಲರಿಗೂ ಅಚ್ಚುಕಟ್ಟಾದ ಭೋಜನ ವ್ಯವಸ್ಥೆಯನ್ನೂ ಮಾಡಿದ್ದರು.
ಅವರು ಅರುವತ್ತರ ಉದ್ದೇಶಕ್ಕೆ ಶಾಂತಿ ಹೋಮ ಹವನ ಸಮಾರಾಧನೆ ಮುಂದೆ ನಡೆಸುತ್ತಾರೆ. ಆದರೆ ಆ ಸಂಭ್ರಮದ ಒಂದು ಭಾಗ ಪುಣ್ಯ ಕೋಟಿಯ ಕುಲಕ್ಕಾಗಿ ವ್ಯಯಿಸಿ ಕೋಟಿ ಪುಣ್ಯ ಸಂಪಾದಿಸುವ ಪುಣ್ಯಕಾರ್ಯ ಮಾಡಿರೋದು ಅತ್ಯಂತ ಅಭಿನಂದನೀಯ.
ಹರೀಶ್ ಆಚಾರ್ಯರು ಉಡುಪಿ ನಗರದ ಹೃದಯ ಭಾಗದಲ್ಲಿ ( ಸಂಸ್ಕೃತ ಕಾಲೇಜು ರಸ್ತೆ ) ದಶಕಗಳ ಹಿಂದೆ ತಮ್ಮ ಹಿರಿಯರು ಆರಂಭಸಿದ ಹಾಗೂ ಅತ್ಯಂತ ಪ್ರಸಿದ್ಧವಾದ ಶ್ರೀ ಕೃಷ್ಣ ಸ್ಟೋರ್ಸ್ ಎಂಬ ಜಿನಸು ಅಂಗಡಿಯನ್ನು ಯಶಸ್ವಿಯಾಗಿ ನಡೆ ಸುತ್ತಿದ್ದಾರೆ.
ಆಚಾರ್ಯರು ಕಳೆದ ಕೆಲವು ವರ್ಷಗಳಿಂದ ಗೋಸೇವೆಯನ್ನೂ ಮಾಡುತ್ತಲೇ ಬಂದಿದ್ಧಾರೆ.
ಮಹರ್ಷಿ ವೇದವ್ಯಾಸರು ,ಆಚಾರ್ಯ ಚಾಣಕ್ಯ ಮೊದಲಾದವರು ಅತ್ಯಂತ ಅದೇಶವೆಂಬ ರೀತಿ ಯಲ್ಲಿ ಹೇಳಿದ ಒಂದು ಮಾತು – ಸಮಾಜ ದಲ್ಲಿ ಗೋವಿನ ಪೋಷಕರನ್ನು ಹಾಗೂ ಧನಿಕರನ್ನು ( ಇಂಥಹ ಸತ್ಕರ್ಮ ನಿರತರಾದವರು ) ಸಮಾಜ ಆದ್ಯತೆಯ ಮೇರೆಗೆ ಪೋಷಿಸಬೇಕು ಪ್ರೋತ್ಸಾಹಿ ಸಬೇಕು.
ಅದರಿಂದ ಲೋಕಕ್ಕೆ ಒಳಿತಾಗುತ್ತದೆ .ಆ ಹಿನ್ನೆಲೆ ಯಲ್ಲಿ ಹರೀಶ್ ಆಚಾರ್ಯರಂಥವರಿಗೆ ಶುಭ ಹಾರೈಸುವುದು , ಅವರು ನಡೆಸುವ ಇಂಥಹ ಸತ್ಕಾರ್ಯಗಳಿಗೆ ನೆರವಾಗೋದು ಮತ್ತು ಅವರ ವ್ಯಾಪಾರ ವ್ಯವಹಾರಗಳಿಗೆ ಹೆಚ್ಚು ಪ್ರೋತ್ಸಾಹಿ ಸೋದು ನಮ್ಮಿಂದ ಸಾಧ್ಯವಾದರೆ ಅವರ ಪುಣ್ಯ ಕಾರ್ಯಗಳಲ್ಲಿ ನಮಗೂ ಒಂದಂಶ ಪುಣ್ಯ ಒದಗೀತು.
✍️ಜಿ ವಾಸುದೇವ ಭಟ್ ಪೆರಂಪಳ್ಳಿ
![](https://karavalixpress.com/wp-content/uploads/2024/07/WhatsApp-Image-2024-07-14-at-6.54.03-PM.jpeg)
![](https://karavalixpress.com/wp-content/uploads/2024/07/adarsha.jpg)
![](https://karavalixpress.com/wp-content/uploads/2024/07/gandhi-hospital.jpg)
![](https://karavalixpress.com/wp-content/uploads/2024/07/Inchara.jpg)
![](https://karavalixpress.com/wp-content/uploads/2024/07/newcity.jpg)
![](https://karavalixpress.com/wp-content/uploads/2024/07/Prasad-netralaya.jpg)
![](https://karavalixpress.com/wp-content/uploads/2024/04/satyanath-ad.jpeg)
![](https://karavalixpress.com/wp-content/uploads/2023/11/WhatsApp-Image-2023-11-10-at-6.56.43-PM-300x300.jpeg)
![](https://karavalixpress.com/wp-content/uploads/2024/01/WhatsApp-Image-2024-01-13-at-12.44.55-PM.jpeg)