ಈ ಶಿಬಿರವನ್ನು ಕರ್ನಾಟಕ ಸರಕಾರ ಮಾಜಿ ಸಂಸದರು ಹಾಗೂ ಸಚಿವರಾದ ಸನ್ಮಾನ್ಯ ಶ್ರೀ ವಿನಯ ಕುಮಾರ್ ಸೊರಕೆಯವರು ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಲಿರುವರು. ಡಯಾಬಿಟೀಸ್ ಖಾಯಿಲೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಡಯಾಬಿಟೀಸ್ ರಸಪ್ರಶ್ನೆ ಕರ್ಯಕ್ರಮವನ್ನು ಉಡುಪಿ ತಾಲೂಕಿನ ಮಕ್ಕಳಿಗೆ ಆಯೋಜಿಸಲಾಗಿತ್ತು.
ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಆದರ್ಶ ಆಸ್ಪತ್ರೆಯ ತಜ್ಞ ವೈದ್ಯರುಗಳಾದ, ಡಾ| ಜಿ.ಎಸ್.ಚಂದ್ರಶೇಖರ್ ಹಿರಿಯ ವೈದ್ಯಕೀಯ ತಜ್ಞರು, ಡಾ| ಉದಯ ಕುಮಾರ ಪ್ರಭು ಹಿರಿಯ ವೈದ್ಯಕೀಯ ತಜ್ಞರು, ಡಾ| ಸುದೀಪ್ ಶೆಟ್ಟಿ ವೈದ್ಯಕೀಯ ತಜ್ಞರು, ಡಾ| ಶ್ರೀಕಾಂತ ಕೃಷ್ಣ ಹಿರಿಯ ಹೃದ್ರೋಗ ತಜ್ಞರು, ಡಾ| ವಿಶು ಕುಮಾರ ಬಿ ಹೃದ್ರೋಗ ತಜ್ಞರು, ಡಾ| ಮೇಘಾ ಪೈ ಮೂತ್ರಪಿಂಡ ಖಾಯಿಲೆಗಳ ತಜ್ಞರು, ಡಾ| ಸಜ್ಜಾ ವೆಂಕಟೇಶ್ ನರರೋಗ ತಜ್ಞರು, ಡಾ| ಅಭಿಜಿತ್ ಕುಮಾರ್ ನೇತ್ರ ತಜ್ಞರು ಭಾಗವಹಿಸಲಿರುವರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸುವ ಎಲ್ಲರಿಗೂ ಮೂತ್ರಪಿಂಡ ಖಾಯಿಲೆಗಳ ತಪಾಸಣೆ, ನರರೋಗ ತಪಾಸಣೆ, ಹೃದಯ ರೋಗದ ತಪಾಸಣೆ, ಕಣ್ಣಿನ ತಪಾಸಣೆ ಹಾಗೂ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ, ರಕ್ತ ದೊತ್ತಡ ಪರೀಕ್ಷೆ, ರಕ್ತದ ಸಕ್ಕರೆ ಅಂಶ, ರಕ್ತದ ಕೊಬ್ಬಿನಾಂಶ ಹಾಗೂ ಇಸಿಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡ ಲಾಗುವುದು. ವೈದ್ಯರ ಪರೀಕ್ಷೆಯ ಸಮಯದಲ್ಲಿ ಅಗತ್ಯವೆಂದು ಕಂಡುಬರುವ ರೋಗಿಗಳಿಗೆ ಹೃದಯದಸ್ಕ್ಯಾನಿಂಗ್ (ಇಕೋ) ಹಾಗೂ ಟಿಎಂಟಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು.