ಪ್ರಶಾಂತ್ ಸಂಬರಗಿಗೆ ದೇವರು ಒಳ್ಳೆಯದು ಮಾಡಲಿ ಎನ್ನತ್ತಲೆ ಖಡಕ್ ಉತ್ತರ ಕೊಟ್ಟ ಕುಸುಮಾ

ಬೆಂಗಳೂರು: ಫೇಸ್ ಬುಕ್ ನಲ್ಲಿ ತಮಗೆ ಅವಮಾನ ವಾಗುವಂತೆ ಬರೆದಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ವಿರುದ್ಧ ಕುಸುಮಾ ಹನುಮಂತ ರಾಯಪ್ಪ ಫೇಸ್ ಬುಕ್ ಮೂಲಕವೇ ಉತ್ತರ ನೀಡಿದ್ದಾರೆ.

ಡಿಕೆಶಿ ಮನೆಗೆ ಸೋಮವಾರ ಸಿಸಿಬಿ ದಾಳಿ ನಡೆದಿದೆ. ಅದರ ನಂತರ ಪ್ರಶಾಂತ ಸಂಬರಗಿ ಕುಸುಮಾ ಕಾಂಗ್ರೆಸ್​ ಸೇರ್ಪಡೆ ಗೊಳ್ಳುತ್ತಿರುವ ಫೋಟೋ ಹಾಕಿ “ಕುಸುಮಾರ ದುರಾದೃಷ್ಟ ಡಿ ಕೆ ರವಿಯಿಂದ ಡಿ ಕೆ ಶಿವಕುಮಾರ್ ಗೆ ವರ್ಗಾವಣೆ ಯಾಗಿದೆ” ಕುಸುಮಾ ಜಿಂದಾಬಾದ್​ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

ಸದ್ಯ ಫೇಸ್ ಬುಕ್ ಮೂಲಕವೇ ತಿರುಗೇಟು ನೀಡಿರುವ
ಕುಸುಮಾ ಅವರು, ಸಹೋದರ ಪ್ರಶಾಂತ್ ಸಂಬರಗಿ ಯವರೆ, ವೈಯುಕ್ತಿಕವಾಗಿ ನಿಮ್ಮ ಪರಿಚಯ ನನಗಿಲ್ಲ. ನೀವು ಡ್ರಗ್ಸ್ ಹಾಗೂ ಇನ್ನಿತರ ಸಾಮಾಜಿಕ ಪಿಡುಗುಗಳ ವಿರುದ್ದ ನಡೆಸುತ್ತಿರುವ ಹೋರಾಟ ಮತ್ತು ಯುವ ಜನತೆ ಯಲ್ಲಿ ಡ್ರಗ್ಸ್ ವಿರುದ್ಧವಾಗಿ ಜಾಗೃತಿ ಮೂಡಿಸುತ್ತಿರುವ ನಿಮಗೆ ಅಭಿನಂದನೆಗಳು ಎಂದಿದ್ದಾರೆ.

ಬೇರೆಯವರನ್ನು ಮೆಚ್ಚಿಸುವ ಭರದಲ್ಲಿ ನನ್ನ ಅದೃಷ್ಟ ವಿಷಯವನ್ನು ಪ್ರಸ್ತಾಪಿಸಸಿರುವ ನೀವು, ಯಾರೊಬ್ಬರ ಹಿಂದೆ-ಮುಂದೆ ತಿಳಿಯದೇ ಚಾರಿತ್ರ್ಯವಧೆಗೆ ಇಳಿಯುವುದು ನಿಮ್ಮ ಘನತೆಗೆ ಶೋಭೆ ತರುವಂತದಲ್ಲ ಎಂಬುದು ನನ್ನ ಅನಿಸಿಕೆ.

ಇದೇ ರೀತಿ ನಿಮ್ಮ ಮನೆಯಲ್ಲೇ ಅಕ್ಕ-ತಂಗಿ ನನ್ನ ಸ್ಥಾನ ದಲ್ಲಿದ್ದಿದ್ದರೆ ಹೀಗೆಯೇ ವಿಡಂಬಿಸುತ್ತಿದ್ದಿರಾ? ಎಂದು ಪ್ರಶ್ನಿ ಸಿದ್ದಾರೆ. ಹೆಣ್ಣು‌ ಎಂಬ ಮಾತ್ರಕ್ಕೆ ಇಂತಹ ಅಪ ಪ್ರಚಾರ ಗಳಿಗೆ ಒಳಗಾಗಬೇಕೆ? ಬೇರೆಯವರ ಮನೆಯ ಹೆಣ್ಣು ಮಗಳ ಅದೃಷ್ಟ ಯಾವುದು ಎಂದು ಹುಡುಕುವ ಶಕ್ತಿ ಇರುವ ನಿಮಗೆ ಹತ್ರಾಸ್ ನ ಮನೀಷಾ ಅತ್ಯಾಚಾರ-ಕೊಲೆ ಪ್ರಕರಣ ಕಾಣಲಿಲ್ಲವೇಕೆ? ಎಂದು ಕೇಳಿ ಸಹೋದರ ಪ್ರಶಾಂತ್ ಸಂಬರಗಿ ಅವರೇ, ಇದರಿಂದ ಹೆಣ್ಣುಮಕ್ಕಳ ಕುರಿತ ನಿಮ್ಮ ಆಲೋಚನೆಗಳು ತಿಳಿಯುತ್ತದೆ.

ಈ ತರಹದ ಯೋಚನೆಗಳನ್ನು ಮುಂದುವರಿಸಿ, ದೇವರು ನಿಮಗೆ ಒಳ್ಳೆಯದು ಮಾಡಲಿ ಎಂಬ ಪೋಸ್ಟ್ ಹಾಕಿದ್ದಾರೆ.

 
 
 
 
 
 
 
 
 
 
 

Leave a Reply