ಉಡುಪಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಪಕ್ಕದ ಕೃಷ್ಣ ಕೃಪಾ ಕಟ್ಟಡದ ವರ್ತಕರ ಸಂಘದ ಆಶ್ರಯದಲ್ಲಿ ಶ್ರೀ ವಾಸುಕೀ ನಾಗದೇವರ ಸನ್ನಿಧಾನದಲ್ಲಿ  ವಾರ್ಷಿಕ ಪೂಜಾ ಮಹೋತ್ಸವ.  

ಉಡುಪಿ ಕೆ ಎಸ್ ಆರ್ ಟಿಸಿ  ಬಸ್ ನಿಲ್ದಾಣ ಸಮೀಪದ  ಕೃಷ್ಣ ಕೃಪಾ ಕಟ್ಟಡದ ವರ್ತಕರ ಸಂಘದ ಆಶ್ರಯದಲ್ಲಿ  ಶ್ರೀ ವಾಸುಕೀ ನಾಗದೇವರ ಸನ್ನಿಧಾನದಲ್ಲಿ 4ನೇ  ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಪೆರಂಪಳ್ಳಿ  ಕೃಷ್ಣ ಮೂರ್ತಿ ಭಟ್  ಮಾರ್ಗ ದರ್ಶನದಲ್ಲಿ  ಪಂಚಾಮೃತ ಅಭಿಷೇಕ, ಸಾನಿಧ್ಯ ಹೋಮ, ನವಕಪ್ರಧಾನ ಹೋಮ, ಕಲಶಾಭಿಷೇಕ, ಆಶ್ಲೇಷಾ ಬಲಿ. ಬೋಂಡಾಭಿಷೇಕ, ವೈದಿಕರು ತಂಡದವರು  ನೆಡೆಸಿಕೊಟ್ಟರು. 
ರಾಘವೇಂದ್ರ ಉಪಾಧ್ಯ ಅಲೆವೂರು ನಾಗ ದರ್ಶನ ಸೇವೆ ನೀಡಿ ಭಕ್ತರಿಗೆ ಅಭಯ ಪ್ರಸಾದ ನೀಡಿದರು. ಪಲ್ಲ ಪೂಜೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ  ಸಾವಿರಾರು ಭಕ್ತರು ಭೋಜನ ಪ್ರಸಾದ  ಸ್ವೀಕರಿಸಿದರು. 
ಕೊಡವೂರು ದಿನೇಶ ತಂಡದವರಿಂದ ಭಕ್ತಿ ರಸ ಮಂಜರಿ ಕಾರ್ಯಕ್ರಮ  ನೆಡೆಯಿತು. ಕೃಷ್ಣ ಕೃಪಾ ಕಟ್ಟಡದ ವರ್ತಕ ಸಂಘದ ಅಧ್ಯಕ್ಷ ಸತೀಶ ಹೆಗ್ಡೆ, ಸುಧಾಕರ, ಗಣೇಶ ಶೇರಿಗಾರ, ವಾಸುದೇವ ಪೈ, ಇತರ ಪದಾಧಿಕಾರಿಗಳು ಉಪಸ್ಥರಿದ್ದರು. 
 
 
 
 
 
 
 
 
 
 
 

Leave a Reply