ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ತುರೀಯಾಶ್ರಮ ( ಸನ್ಯಾಸ) ಸ್ವೀಕಾರದ 33ನೇ ವರ್ಧಂತಿ ಉತ್ಸವ

ಉಡುಪಿ ಶ್ರೀ ಪೇಜಾವರ ಮಠಾಧೀಶರೂ ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ತುರೀಯಾಶ್ರಮ ( ಸನ್ಯಾಸ) ಸ್ವೀಕಾರದ 33 ವರ್ಧಂತಿ ಉತ್ಸವವು ಉಡುಪಿ  ಮಠದಲ್ಲಿ ಮಂಗಳವಾರ ನೆರವೇರಿದ ಸಂದರ್ಭದಲ್ಲಿ ಶ್ರೀಗಳವರಿಗೆ ಅಭಿಮಾನಿಗಳು ಶಿಷ್ಯರು ವಿಶೇಷ ಪುಷ್ಪಾಭಿಷೇಕ ನೆರವೇರಿಸಿ ಗುರುವಂದನೆ ಸಲ್ಲಿಸಿದರು . ಶ್ರೀಗಳ ವಿದ್ಯಾರ್ಥಿಗಳ ವೇದ ಘೋಷದೊಂದಿಗೆ  ಈ ಕಾರ್ಯಕ್ರಮ  ನೆರವೇರಿತು. 

ಮಠದ ದಿವಾನರಾದ ಎಂ ರಘುರಾಮಾಚಾರ್ಯ , ವಿದ್ವಾನ್ ವಿಶ್ವೇಶ ಭಟ್ ರಾಮಚಂದ್ರ ಭಟ್ , ಸಿ ಇ ಒ ಸುಬ್ರಹ್ಮಣ್ಯ ಭಟ್ , ವ್ಯವಸ್ಥಾಪಕ ಇಂದು ಶೇಖರ ಹೆಗ್ಡೆ , ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಆಚಾರ್ಯ , ಕೃಷ್ಣ ಭಟ್ , ಹಾಗೂ ಎಸ್ ವಿ ಭಟ್ ಮೊದಲಾದವರು ಭಕ್ತಿ ಗೌರವ ಸಮರ್ಪಿಸಿದರು . ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿ  ವಂದಿಸಿದರು  .

 
 
 
 
 
 
 
 
 
 
 

Leave a Reply