ತಾಮ್ರ ಸಮರ್ಪಣಾ ಸೇವೆ ಎಂಬ ನೂತನ ಪರಿಕಲ್ಪನೆ 

ಮಂಗಳವಾರ ಸಂಕಷ್ಟಿ ದಿನ ಉದ್ಯಾವರದ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋ ದ್ಧಾರದ ಸಲುವಾಗಿ ನಡೆದ ತಾಮ್ರ ಸಮರ್ಪಣಾ ಸೇವೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಗವದ್ಭಕ್ತರು ಉತ್ಸಾಹದಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 
ತಮ್ಮ ಮನ ದೇವತೆ ಇಷ್ಟ ಸಿದ್ಧಿ ವಿನಾಯಕನನ್ನು ಮನದಲ್ಲಿ ಪ್ರಾರ್ಥಿಸುತ್ತಾ, ಭಕ್ತರು ತಾಮ್ರದ ಹಾಳೆಯನ್ನು ಹಿಡಿದುಕೊಂಡು ದೇವಸ್ಥಾನದ ಒಳಾಂಗಣದಲ್ಲಿ ಪ್ರದಕ್ಷಿಣೆ ಬಂದು ದೇವರ ಮುಂದೆ ಹಾಳೆಯನ್ನಿಟ್ಟು ಕೃಷ್ಣಾರ್ಪಣ ಮಾಡಲು ಅವಕಾಶ. ಸಿದ್ಧಿವಿನಾಯಕ ದೇವರ ಸಮಸ್ತ ಭಕ್ತರು ತಮ್ಮ ತಮ್ಮ ಶಕ್ತ್ಯಾನುಸಾರ ತಾಮ್ರ ಮೇಲ್ಛಾವಣಿ ಸೇವೆಯನ್ನು ಸಮರ್ಪಿಸಿ ಕೃತಾರ್ತರಾಗಲು ಈ ಒಂದು ಯೋಜನೆ ಸುವರ್ಣ ಅವಕಾಶ 
ಈ ತಾಮ್ರ ಹಾಳೆಯ ಸಮರ್ಪಣಾ ಸೇವೆ ಭಕ್ತರ ಅನುಕೂಲಕ್ಕಾಗಿ ಇನ್ನಷ್ಟು ದಿನ ನಡೆಯಲಿದೆ. ಊರ -ಪರವೂರ, ಹಾಗೂ ಮಾಗಣೆಯ ಭಕ್ತರು ಈ ಪುಣ್ಯಾವಕಾಶವನ್ನು ಸದುಪಯೋಗಿಸಿಕೊಳ್ಳಬಹುದು. 
 
 
 
 
 
 
 
 
 

Leave a Reply