ಉದ್ಯಾವರ ಶ್ರೀ ಸಿದ್ಧಿ ವಿನಾಯಕ ದೇವಳದಲ್ಲಿ ತಾಮ್ರ ಸಮರ್ಪಣಾ ಸೇವೆಗೆ ಚಾಲನೆ.

ಉದ್ಯಾವರ ಮಹತೋಬಾರ ಶ್ರೀ ಸಿದ್ಧಿ ವಿನಾಯಕ ಅಂಗಾರಕ ಸಂಕಷ್ಟ ಹರ ಚತುರ್ಥಿಯ ಅಂಗವಾಗಿ ದೇವರಿಗೆ ಪಂಚಾಮೃತ ಸಹಿತ ವಿಶೇಷ ಕಲಶಾ ಭಿಷೇಕ, ಮೋದಕ ಸೇವೆ, ಮೂಡುಗಣಪತಿ ಹಾಗು 108 ಕಾಯಿ ಗಣಹೋಮ ನಡೆಯಿತು.

ಸುತ್ತುಪೌಳಿ ಜೀರ್ಣೋದ್ಧಾರ ಪ್ರಯುಕ್ತ ತಾಮ್ರದ ಹೊದಿಕೆ ಅಳವಡಿಸುವ ಸಲುವಾಗಿ ಭಕ್ತರಿಂದ ತಾಮ್ರ ಸಮರ್ಪಣಾ ಸೇವೆ ನಡೆಯಿತು.

ಈ ಸೇವೆ ಬ್ರಹ್ಮಕಲಶದ ತನಕವೂ ನಡೆಯಲಿದೆ ಎಂದು ಶ್ರೀದೇವಳದ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply