ಸುಳ್ಯ ತಾಲೂಕಿನ ಕೊಲ್ಲ ಮೋಗ್ರವಿನಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆನೂತನ ಧ್ವಜಸ್ತಂಭ ಮಂಗಳವಾರ ಸಂಜೆ ತಲುಪಿದ್ದು ವೇದಮೂರ್ತಿ ಶ್ರೀ ರಾಘವೇಂದ್ರ ಉಪಾಧ್ಯಾಯ ಪೂಜಾವಿಧಾನ ದೊಂದಿಗೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ವಿಷ್ಣುಮೂರ್ತಿ ಉಪಾಧ್ಯಾಯ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಗುಂಡು ಅಮೀನ್, ವಾಸುದೇವ ಸಾಲಿಯಾನ್, ಸುಧಾಕರ್ ಕುಂದರ್, ಚಂದ್ರೇಶ್, ವೇದವ್ಯಾಸ ಮತ್ತಿತರು ಇದ್ದರು.