ಕೊಡವೂರು ಶ್ರೀಶಂಕರನಾರಾಯಣ ದೇವಳದಲ್ಲಿ ವಿಶೇಷ ಅಪ್ಪ ಸೇವೆ

ಇಂದು ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಲೋಕ ಕಲ್ಯಾಣರ್ಥವಾಗಿ ವೇದಮೂರ್ತಿ ಹಯವದನ ತಂತ್ರಿ ನೇತೃತ್ವದಲ್ಲಿ ಶತರುದ್ರ ಪಾರಾಯಣ, ವಿಶೇಷ ಅಪ್ಪಸೇವೆ, ಸೀಯಾಳಾಭಿಷೇಕ ನಡೆಯಿತು.

ಶಂಕರನಾರಾಯಣ ನಾಮಾವಳಿ ಸಹಿತ ಪಾರಾಯಣ, ಶೋಭಾನೇ ಮತ್ತು ಭಜನಾ ಸೇವೆಯು
ಕೊಡವೂರು ಬ್ರಾಹ್ಮಣ ಮಹಾಸಭಾ ಸದಸ್ಯರು ನಡೆಸಿ ಕೊಟ್ಟರು.

ಭಕ್ತವೃಂದ ಹಾಗು ಗ್ರಾಮಸ್ಥರ ಸಹಕಾರದಿಂದ ಈ ಎಲ್ಲಾ ಕಾರ್ಯಕ್ರಮಗಳು ಜರಗಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ, ಸದಸ್ಯರಾದ ಜನಾರ್ದನ ಕೊಡವೂರ್, ರಾಜ ಎ ಸೇರಿಗಾರ್, ಬೇಬಿ ಮೆಂಡನ್, ಕೃಷ್ಣ ಮೂರ್ತಿ ಭಟ್, ಪಿಆರ್ ಓ ಉಮೇಶ್ ರಾವ್, ಅನಂತ ಪದ್ಮನಾಭ ಭಟ್, ಬ್ರಾಹ್ಮಣ ಸಭಾ ಅಧ್ಯಕ್ಷ ನಾರಾಯಣ ಬಲ್ಲಾಳ್, ಕಾಂತಪ್ಪ ಕರ್ಕೇರ, ಶಿವಪ್ಪ ಕಾಂಚನ್, ಹರೀಶ ಕೋಟ್ಯಾನ್, ಚಂದ್ರಶೇಖರ್ ಟಿ., ಕಾಳು ಸೇರಿಗಾರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply