ಕಠ್ಮಂಡು: ಭಾರತದ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದೇ ವೇಳೆ ನೇಪಾಳ ಸರ್ಕಾರ ನೇಪಾಳದ ಅಯೋಧ್ಯಪುರಿಯಲ್ಲಿ ಶ್ರೀರಾಮನ ಬೃಹತ್ ದೇಗುಲ ನಿರ್ಮಾಣ ಕಾರ್ಯಕ್ಕೆ ಹಣ ಬಿಡುಗಡೆ ಮಾಡಿದೆ.
ನೇಪಾಳ ಸರ್ಕಾರ ದೇಗುಲಕ್ಕಾಗಿ ಸಾವಿರಾರು ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕವಾಗಿ ನೇಪಾಳ ನಲುಗಿದ್ದರೂ ದೇಗುಲ ನಿರ್ಮಾಣಕ್ಕೆ ಹಿಂದಿನ ಬಜೆಟ್ನಲ್ಲಿ ಮಾತು ಕೊಟ್ಟಂತೆ ನೇಪಾಳ ಸರ್ಕಾರ ಹಣ ಬಿಡುಗಡೆ ಗೊಳಿಸಿದೆ.