ಶ್ರೀಪುತ್ತಿಗೆ ವಿದ್ಯಾರ್ಥಿಗಳಿಂದ ಗುರುಕಾಣಿಕೆಯಾಗಿ ಶ್ರೀಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಸರ್ವಸಜ್ಜಿತವಾದ ವಾಹನ ಸಮರ್ಪಣೆ

ಉಡುಪಿ ಶ್ರೀಪುತ್ತಿಗೆ ಮಠದ ವಿದೇಶೀ ಶಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಪುತ್ತಿಗೆ ವಿದ್ಯಾಪೀಠದ ಹಳೆವಿದ್ಯಾರ್ಥಿಗಳಿಂದ ಶ್ರೀ ಶ್ರೀಗಳವರ ಷಷ್ಟ್ಯಬ್ಧಿ ಪ್ರಯುಕ್ತ ವಿಶೇಷವಾದ, ಸರ್ವಸಜ್ಜಿತವಾದ, ಒಂದು ಕಾಲು ಕೋಟಿ ರೂಪಾಯಿ ವೆಚ್ಚದ ವಾಹನವೊಂದನ್ನು ಇಂದು ಶ್ರೀಗಳಿಗೆ ಸಮರ್ಪಿಸ ಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಭೀಮನಕಟ್ಟೆ ಮಠಾಧೀಶರಾದ ಕೀರ್ತಿಶೇಷ ಶ್ರೀ ರಘುಮಾನ್ಯತೀರ್ಥರು ನಡೆಸಿದ್ದ ಮೂವತ್ತೆರಡು ಲಕ್ಷ ಲಕ್ಷ್ಮೀನರಸಿಂಹ ಮಂತ್ರಜಪದ ಅಂಗವಾಗಿ ಹೋಮಗಳನ್ನು ಶ್ರೀಪುತ್ತಿಗೆ ನರಸಿಂಹದೇವರ ಸನ್ನಿಧಾನದಲ್ಲಿ ಅರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀಪಾದಂಗಳವರು ಮಾತನಾಡಿ, ಹಳೆವಿದ್ಯಾರ್ಥಿಗಳ ಸೇವೆಯನ್ನು ಅಭಿನಂದಿ ಸುತ್ತಾ, “ಮುಂದಿನ ತಮ್ಮ ನಾಲ್ಕನೇ ಪರ್ಯಾಯದ ನಿಮಿತ್ತವಾಗಿ ನೀಡಿದಂತಹ ವಾಹನವು ಶ್ರೀವಿಠ್ಠಲ ದೇವರ ರಥೋತ್ಸವದಂತೆ ಆಗಲಿ” ಎಂಬುದಾಗಿ ಹಾರೈಸಿ, ಎಲ್ಲಾ ವಿದ್ಯಾರ್ಥಿಗಳಿಗೆ, ದಾನಿಗಳಿಗೆ ಶುಭವನ್ನು ಹಾರೈಸಿದರು.
 
 
 
 
 
 
 
 
 
 
 

Leave a Reply