ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಶ್ರೀಮಹಾಗಣಪತಿ ದೇವಸ್ಥಾನದ “ಶ್ರೀ ಕ್ಷೇತ್ರ ಶಿವಳ್ಳಿ” ಎಂಬ ವೆಬ್ಸೈಟ್ ಲೋಕಾರ್ಪಣೆ.

ಶ್ರೀಕೃಷ್ಣ ಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ, ಪರ್ಯಾಯ ಪೀಠಾಧೀಶರಾದ  ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಉಡುಪಿಯ ಮೂಡುಪೆರಂಪಳ್ಳಿ ಶಿವಳ್ಳಿಯ ಶ್ರೀಮಹಾಲಿಂಗೇಶ್ವರ ಶ್ರೀಮಹಾಗಣಪತಿ ದೇವಸ್ಥಾನ  ಇದರ  “ಶ್ರೀ ಕ್ಷೇತ್ರ ಶಿವಳ್ಳಿ” ಎಂಬ ವೆಬ್ಸೈಟ್  ಅನಾವರಣ ಗೊಳಿಸಿದರು. 
ಶ್ರೀದೇವಳದ ಆಡಳಿತ ಮೊಕ್ತೇಸರ ಪ್ರಸನ್ನ ಕುಮಾರ್ ರಾವ್, ಟ್ರಸ್ಟೀ ಶಕರ ಕುಲಾಲ್ ಹಾಗೂ ರಾಘವೇಂದ್ರ ಭಟ್ , ಪ್ರಶಾಂತ್ ಭಟ್, ವಿಜಯಕುಮಾರ್, ಹರ್ಷ ಭಟ್ ಮತ್ತು ಮಠದ ವ್ಯವಸ್ಥಾಪಕ ಗೋವಿಂದರಾಜ್ ಉಪಸ್ಥಿತರಿದ್ದರು. ಮಠದ ಪುರೋಹಿತರಾದ ಲಕ್ಷ್ಮೀಶ ಭಟ್ ಕಾರ್ಯಕ್ರಮ ನಿರ್ವಹಿಸಿದರು.
 
 
 
 
 
 
 
 
 
 
 

Leave a Reply