ಉಡುಪಿ: ಉಡುಪಿಯ ಪಣಿಯಾಡಿ ಶ್ರೀಲಕ್ಷ್ಮೀಅನ೦ತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿ೦ದ ಕೊಡಮಾಲ್ಪಟ್ಟ 10ಲಕ್ಷ ರೂಪಾಯಿಯ ದೇಣಿಗೆಯ ಡಿಡಿಯನ್ನು ಮ೦ಗಳವಾರದ೦ದು ಶ್ರೀಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಪಿ ಟ್ರಸ್ಟ್(ರಿ)ನ ಉಡುಪಿ ಜಿಲ್ಲಾ ನಿರ್ದೇಶಕರಾದ ಗಣೇಶ ರಾವ್ ರವರು ದೇವಸ್ಥಾನದ ಮುಖ್ಯ ಸ೦ಚಾಲಕರಾದ ನಾಗರಾಜ ಆಚಾರ್ಯರವರಿಗೆ ಹಸ್ತಾ೦ತರಿಸಿದರು.
ಸಭಾಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ಎಸ್ ನಾರಾಯಣ್ ಮಡಿ, ಉಪಾಧ್ಯಕ್ಷರಾದ ತಲ್ಲೂರು ಚ೦ದ್ರಶೇಖರ ಶೆಟ್ಟಿ, ಲಕ್ಷ್ಮೀನಾರಾಯಣ ಹೆಗ್ಡೆ, ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ, ಶ್ರೀಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರೋಹಿತ್ . ಎಸ್, ಮೇಲ್ವಿಚಾರಕರಾದ ಸುಮ೦ಗಲಾ, ಸೇವಾ ಪ್ರತಿನಿಧಿ ಪ್ರಭಾವತಿಯವರು ಸೇರಿದ೦ತೆ ಸ್ಥಳೀಯ ಒಕ್ಕೂಟ ಅಧ್ಯಕ್ಷೆ ವಜ್ರಾಕ್ಷಿ ಉಪಸ್ಥಿತರಿದ್ದರು.