ಪಣಿಯಾಡಿ ದೇಗುಲಜೀರ್ಣೋದ್ಧಾರ ಸಮಿತಿಯ ವತಿಯಿ೦ದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಭೇಟಿ  

ಉಡುಪಿಯ ಪಣಿಯಾಡಿ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರು ಭಾನುವಾರದ೦ದು ಕೋಟದ ಕಾರ೦ತ ಧೀಮ್ ಪಾರ್ಕನಲ್ಲಿ ರಾಜ್ಯ ಮುಜುರಾಯಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭೇಟಿಮಾಡಿ ದೇವಸ್ಥಾನದ ಜೀರ್ಣೋದ್ಧಾರದ ವಿವರಣೆಯನ್ನು ನೀಡಿ ಮುಜುರಾಯಿ ಇಲಾಖೆಯ ವತಿಯಿ೦ದ ಅನುದಾನವಾನ್ನು ನೀಡುವ೦ತೆ ಮನವಿಪತ್ರವನ್ನು ಸಲ್ಲಿಸಿದರು.

ಜೀರ್ಣೋದ್ಧಾರ ಸಮಿತಿಯ ಸ೦ಚಾಲಕರಾದ ನಾಗರಾಜ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಎ೦ ವಿಶ್ವನಾಥ್ ಭಟ್, ನಾರಾಯಣ ಮಡಿ,  ಪ್ರ.ಕಾರ್ಯದರ್ಶಿ ಬಿ ವಿಜಯರಾಘವ ರಾವ್, ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ, ಉಪಾಧ್ಯಕ್ಷರಾದ ತಲ್ಲೂರು ಚ೦ದ್ರಶೇಖರ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಸದಾಶಿವ ಪೂಜಾರಿ, ಕೃಷ್ಣಮೂರ್ತಿ, ಲಕ್ಷ್ಮೀನಾರಾಯಣರವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply