ಭಗವದ್ಗೀತೆ ಸ್ಪರ್ಧೆಯಲ್ಲಿ ನಿಹಾರಿಕಾಗೆ ಬಹುಮಾನ.

ಶ್ರೀ ಸುಬ್ರಹ್ಮಣ್ಯ ಶ್ರೇಷ್ಠಿ ರುಕ್ಮಿಣಿಯಮ್ಮ ಪ್ರತಿಷ್ಟಾನ ಅಜ್ಜಂಪುರ ಹಾಗೂ ಶಿವಮೊಗ್ಗದ ಗೀತಾ ಮಿತ್ರ ಫಿಲಾಸೋಪಿಕ್ ಮ್ಯಾಗಜೀನ್ ಡಿಸೆಂಬರ್ ತಿಂಗಳಿನಲ್ಲಿ ನಡೆಸಿದ ರಾಜ್ಯ ಮಟ್ಟದ ಆನ್ ಲೈನ್ ಭಗವದ್ಗೀತೆ ಕಂಠಪಾಠ ಸ್ಪರ್ಧೆಯ, ಚಿಣ್ಣರ ವಿಭಾಗದಲ್ಲಿ , ನಿಹಾರಿಕಾ ಕೆ. ಎಸ್ 2ನೇ ತರಗತಿ, ಜಿ.ಎಂ. ವಿದ್ಯಾನಿಕೇತನ ಶಾಲೆ, ಬ್ರಹ್ಮಾವರ, ಉಡುಪಿ, ಇವರು ತೃತೀಯ ಬಹುಮಾನ ಪಡೆದಿರುತ್ತಾರೆ.

ಇವರು ಉಡುಪಿ ಕಿನ್ನಿಮೂಲ್ಕಿಯ, ಕೃಷ್ಣಧಾಮ ಮಕ್ಕಳ ಭಗವದ್ಗೀತೆ ಪಠಣ ತಂಡದಲ್ಲಿ ವಿದ್ಯಾವಾರಿಧಿ ಆರ್ ಆರ್ ಶಾಸ್ತ್ರಿ ಇವರ ಉಪಸ್ಥಿತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

 
 
 
 
 
 
 
 
 
 
 

Leave a Reply