ನೀಲಾವರ ದೇವಳಕ್ಕೆ ನೂತನ ಧ್ವಜಮರದ ಮರ ಸಮರ್ಪಣೆ

ನೀಲಾವರ ಶ್ರೀ ಮಹಿಷರ್ಮನೀ ದೇವಸ್ಥಾನಕ್ಕೆ ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಧ್ವಜಮರದ ಮರವನ್ನು ದಾನಿಗಳು ಶನಿವಾರ ಸಮರ್ಪಿಸಿದರು. 22 ಅಡಿ ಉದ್ದದ 6 ಅಡಿ ಸುತ್ತಳತೆಯ ನೂತನ ಧ್ವಜಮರದ ಮರವನ್ನು ಸುಳ್ಯದಿಂದ ತಂದು ನಂತರ ನೀಲಾವರ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆಯ ಮೂಲಕ ದೇವಳಕ್ಕೆ ತಂದು ಧಾರ್ಮಿಕ ವಿವಿಧಾನಗಳೊಂದಿಗೆ ದೇವಳಕ್ಕೆ ಹಸ್ತಾಂತರಿಸಲಾಯಿತು. 

ಈ ಸಂದರ್ಭದಲ್ಲಿ ದಾನಿ ವಿಶ್ವನಾಥ ಸನಿಲ್, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ರಘುರಾಮ ಮಧ್ಯಸ್ಥ, ಕಾರ್ಯನಿರ್ವಹಣಾಕಾರಿ ಪ್ರಶಾಂತ್ ಶೆಟ್ಟಿ, ದೇವಳದ ಅರ್ಚಕರುಗಳಾದ ಕೃಷ್ಣ ಅಡಿಗ,  ಚಂದ್ರಶೇಖರ ಅಡಿಗ, ರಾಘವೇಂದ್ರ ಅಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಸುಧೀರ್ ಕುಮಾರ್ ಶೆಟ್ಟಿ, ರಮೇಶ್ ಪೂಜಾರಿ, ಹೇಮಾ ವಿ.ಬಾಸ್ರಿ, ಸದಾಶಿವ ದೇವಾಡಿಗ, ಮಲ್ಲಿಕಾ ಎಸ್.ಶೆಟ್ಟಿ, ರಮೇಶ್ ನಾಯ್ಕ್, ಸುರೇಂದ್ರ ಸುವರ್ಣ, ಅರ್ಚಕ ವೃಂದ, ಸಿಬ್ಭಂದಿ ವರ್ಗ, ಉಪಾದಿವಂತರು, ಭಕ್ತಾದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply