ನೀಲಾವರ: ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ

ಶ್ರೀ ಕ್ಷೇತ್ರ ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಮಂಗಳವಾರ ಸುಬ್ರಹ್ಮಣ್ಯ ಷಷ್ಠಿ ರಥೋತ್ಸವ ವಿಜೃಂಭಣೆಯಿoದ ನಡೆಯಿತು. ಸೋಮವಾರ ಮೊದಲ ಪಂಚಮೀ ತೀರ್ಥಸ್ನಾನ ನಡೆದು, ರಾತ್ರಿ ರಂಗಪೂಜೆ ಮತ್ತು ದೀಪೋತ್ಸವ ನಡೆಯಿತು. 
ಮಂಗಳವಾರ ಮಹಾಪೂಜೆ ನಂತರ ಷಷ್ಠಿ ರಥೋತ್ಸವ ಜರುಗಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ರಘುರಾಮ ಮಧ್ಯಸ್ತ ಅರ್ಚಕ ಕೃಷ್ಣ ಅಡಿಗ, ಮುಖ್ಯ ಕಾರ್ಯ ನಿರ್ವಹಣಾಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳು, ಅರ್ಚಕ ವೃಂದದವರು, ಚಾಕರಿ ವರ್ಗದವರು, ಸಿಬಂದಿ ವರ್ಗದವರು, ಉಪಸ್ಥಿತರಿದ್ದರು. ನಂತರ ಅನ್ನ ಸಂತರ್ಪಣೆ, ರಾತ್ರಿ ಹನುಮಗಿರಿ ಮೇಳದವರಿಂದ ಯಕ್ಷಗಾನ ನಡೆಯಿತು.
 
 
 
 
 
 
 
 
 
 
 

Leave a Reply