ಉಡುಪಿ : ಕೋಟದ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬವೊಂದು ತುಲಾಭಾರ ಸೇವೆ ಮಾಡಿಸಿ, ಹರಕೆ ತೀರಿಸಿದ್ದು, ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.
ಸಾವಿರಾರು ಭಕ್ತರು ಅಮ್ಮನ ದೇವಳಕ್ಕೆ ಭೇಟಿ ನೀಡುತ್ತಾರೆ. ಸಂತಾನ ಫಲಕ್ಕೆ ಹರಕೆ ಹೊತ್ತಿದ್ದ ಬ್ರಹ್ಮಾವರ ತಾಲೂಕಿನ ಕೋಟದ ಮುಸ್ಲಿಂ ಕುಟುಂಬ ಹರಕೆ ಹೊತ್ತಿದ್ದು, ಇದೀಗ ತಾಯಿ ಮಗ ಒಟ್ಟಾಗಿ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ್ದಾರೆ.