ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೊರೊನಾ ಮುಕ್ತ ಭಾರತಕ್ಕಾಗಿ 1008 ಸೀಯಾಳಾಭಿಷೇಕ

ಉಡುಪಿ:  ಕೊರೊನಾ ಮುಕ್ತ ಭಾರತ , ಸುಖೀ ಸಮೃದ್ಧ ಸುಭಿಕ್ಷ ಶಾಂತಿಪೂರ್ಣ ನೆಮ್ಮದಿಯ ಭಾರತ ಮತ್ತು ಲೋಕಕ್ಷೇಮಕ್ಕಾಗಿ ಹಾಗೂ ನರೇಂದ್ರ ಮೋದಿಯವರಿಗೆ ಈ ಹೋರಾಟದಲ್ಲಿ ಅದ್ಭುತ ಯಶಸ್ಸಿಗಾಗಿ ಪ್ರಾರ್ಥಿಸಿ 1008 ಸೀಯಾಳ ಅಭಿಷೇಕ ಸೇವೆಯು ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ಮುಂಜಾನೆ ನಡೆಯಿತು.

ಪೂಜ್ಯ ಪಲಿಮಾರು ಪುತ್ತಿಗೆ ಪೇಜಾವರ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ,ಶಾಸಕ ರಘುಪತಿ ಭಟ್ ಮತ್ತು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ ಸುರೇಶ್ ನಾಯಕ್,ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಮೊದಲಾದವರ ನೇತ್ರತ್ವದಲ್ಲಿ , ವೇದಮೂರ್ತಿ ರಾಮಕೃಷ್ಣ ತಂತ್ರಿ ಕುಕ್ಕಿಕಟ್ಟೆ ಇವರು ಅಭಿಷೇಕ ನೆರವೇರಿಸಿದರು.ಮತ್ತು ದೇವಳದ ಅರ್ಚಕರು,ಸಿಬಂದಿ ಹಾಗೂ ವಾಸುದೇವ ಭಟ್ ಪೆರಂಪಳ್ಳಿ ಇವರ ಸಂಯೋಜನೆ ಸಹಕಾರದಲ್ಲಿ ದೇವರಿಗೆ ಸೀಯಾಳ ಅಭಿಷೇಕ ನೇರವೇರಿತು.

ಪೇಜಾವರ ಮಠದ ದಿವಾನ ಎಂ ರಘುರಾಮಾಚಾರ್ಯ,ವ್ಯವಸ್ಥಾಪಕ‌ ಸುಬ್ರಹ್ಮಣ್ಯ ಭಟ್, ಶ್ರೀಗಳ ಆಪ್ತಕಾರ್ಯದರ್ಶಿ ವಿಷ್ಣುಮೂರ್ತಿ ಆಚಾರ್ಯ,ಕೃಷ್ಣ ಭಟ್,ಇಂದುಶೇಖರ , ದೇವಳದ ಮೆನೇಜರ್ ರಾಜಶೇಖರ್ ಉಪಸ್ಥಿತರಿದ್ದರು. ಕೊರೊನಾ ನಿರ್ಬಂಧದ ಹಿನ್ನೆಲೆಯಲ್ಲಿ ಭಕ್ತರಿಗೆ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ಇರಲಿಲ್ಲ.ಈ ಸೇವೆಯಲ್ಲಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ವಿಶೇಷ ಶ್ರೇಯಸ್ಸನ್ನು ಪ್ರಾರ್ಥಿಸಲಾಯಿತು.

 

ಈ ಸೀಯಾಳಾಭಿಷೇಕಕ್ಕೆ ಸಹಕಾರ ನೀಡಬಹುದೆಂದು ಬಿಜೆಪಿ ಕಾರ್ಯಕರ್ತರು ಮತ್ತು ರಾಷ್ಟ್ರಭಕ್ತ ನಾಗರಿಕರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನಿವೇದಿಸಲಾಗಿತ್ತು .ಆ ಮನವಿಗೆ ಒಳ್ಳೆಯ ಸ್ಪಂದನೆ ದೊರಕಿದ್ದು ಉಡುಪಿ ಮಂಗಳೂರು ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು ಮೈಸೂರು , ಹುಬ್ಬಳ್ಳಿ ಮಂಡ್ಯ ಧಾರವಾಡ , ದೆಹಲಿ ಮುಂಬಯಿ , ಬೆಳಗಾಮ್ ಹೈದರಾಭಾದ್ ಚೆನ್ನೈ ಮಾತ್ರವಲ್ಲದೇ ಅಮೇರಿಕಾ ದುಬೈ ಆಸ್ಟ್ರೇಲಿಯಾ ಗಳಿಂದಲೂ ಅನೇಕ ಭಕ್ತರು ಆರ್ಥಿಕ ಸಹಕಾರ ನೀಡಿದ್ದರು.

ಇದೇ ವೇಳೆ ಬಂದ ಹಣದಲ್ಲಿ ಅಭಿಷೇಕದ ಖರ್ಚನ್ನು ತೆಗೆದು ಉಳಿಕೆ ಹಣದಲ್ಲಿ ನೀಲಾವರ ಗೋಶಾಲೆಯಲ್ಲಿ ಒಂದು ಹಸುವನ್ನು ನರೇಂದ್ರ ಮೋದಿಯವರ ಹೆಸರಲ್ಲಿ ಒಂದು ವರ್ಷಕ್ಕೆ ದತ್ತು ಸ್ವೀಕಾರ ಮಾಡಲಾಗಿದೆ. ವಿದ್ಯಾಪೋಷಕ್ ನ ಇಬ್ಬರು ಅರ್ಹ ವಿದ್ಯಾರ್ಥಿಗಳಿಗೆ ನರೇಂದ್ರ ಮೋದಿ ವಿದ್ಯಾರ್ಥಿ ವೇತನ ಹತ್ತು ಸಾವಿರ ರೂ, ಉಡುಪಿಯಲ್ಲಿ ನಾಗರಿಕರಿಗೆ ಉಚಿತ ಅಂಬ್ಯುಲೆನ್ಸ್ ಸೇವೆ ಒದಗಿಸುತ್ತಿರುವ ಇಬ್ಬರಿಗೆ ತಲಾ 5000 ರೂ ನಂತೆ ಇಂಧನ ಖರೀದಿಗೆ ನೆರವು ನೀಡಲಾಗಿದೆ. ಶಾಸಕರ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್ ನಡೆಸುತ್ತಿರುವ ಹಡಿಲು ಭೂಮಿ ಕೃಷಿಯ ಕ್ರಾಂತಿ ಕಾರ್ಯಕ್ಕೆ ಬಿತ್ತನೆ ಬೀಜ ಖರೀದಿಗೆ ಹತ್ತು ಸಾವಿರ ರೂ ನೀಡಲು ನಿರ್ಧರಿಸಿರುವುದಾಗಿ ಶಾಸಕ ಕೆ ರಘುಪತಿ ಭಟ್, ಮಹೇಶ್ ಠಾಕೂರ್ 

ತಿಳಿಸಿದ್ದಾರೆ. ಇನ್ನೂ ಸ್ವಲ್ಪ ಹಣ ಉಳಿಯುವ ಸಾಧ್ಯತೆ ಇದ್ದು ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆದ್ದಾರೆ. ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು .

 
 
 
 
 
 
 
 
 
 
 

Leave a Reply