ಕಳಸ ನಿರ್ಮಾಣಕ್ಕೆ ಸಂಗ್ರಹಿಸಿರುವ ಮೊದಲ ಹಂತದ ಮೊಬಲಗು ಹಸ್ತಾಂತರ ಕಾರ್ಯಕ್ರಮ

ಹಿರಿಯಡಕ :- ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸ್ವರ್ಣ ಕಳಸ ನಿರ್ಮಾಣ ಸಮಿತಿ, ಉಡುಪಿ ವಲಯ, ಹಿರಿಯಡ್ಕ ಉಪ ಸಮಿತಿಯ ಸ್ವರ್ಣ ಕಳಸ ನಿರ್ಮಾಣಕ್ಕೆ ಸಂಗ್ರಹಿಸಿರುವ ಮೊದಲ ಹಂತದ ಮೊಬಲಗು ಹಸ್ತಾಂತರ ಕಾರ್ಯಕ್ರಮ ನ.25 ಗುರುವಾರದಂದು ಮಾಧವ ಮಂಗಲ ಸಭಾ ಭವನದಲ್ಲಿ, ಉಪ ಸಮಿತಿಯ ಸಂಚಾಲಕರಾದ ಉದಯ ಪರೀಕರವರ ಅಧ್ಯಕ್ಷತೆಯಲ್ಲಿ ಜರಗಿತು. 

ಸ್ವರ್ಣ ಕಳಸ ನಿರ್ಮಾಣಕ್ಕೆ ಹಿರಿಯಡ್ಕ ಉಪ ಸಮಿತಿಯು ವಿವಿಧ ಗ್ರಾಮ ಸಭಾಗಳ ಮೂಲಕ ಸಂಗ್ರಹಿಸಿರುವ ಮೊದಲ ಹಂತದ ಮೊಬಲಗು ರೂ. 3,50,000/- ನ್ನು ಗ್ರಾಮ ಸಭಾಗಳ ಗುರಿಕಾರರು ಹಾಗೂ ಅಧ್ಯಕ್ಷರುಗಳೂಂದಿಗೆ ಉಡುಪಿ ವಲಯ ಸಮಿತಿಯ ಅಧ್ಯಕ್ಷ ಸತೀಶ್ ಕುಂದರ್ ಮಲ್ಪೆ ಹಾಗೂ ಕಾರ್ಯದರ್ಶಿ ರಾಜೇಂದ್ರ ಸುವರ್ಣ ಹಿರಿಯಡ್ಕ ಇವರಿಗೆ ಹಸ್ತಾಂತರಿಸಲಾಯಿತು. 

ಬಜೆ ಮೇಲ್ಸಾಲು ಸಂಘದ ಮಾಜಿ ಅಧ್ಯಕ್ಷರಾದ ಸುಂದರ್ ಕಾಂಚನ್, ಮೊಗವೀರ ಯುವ ಸಂಘಟನೆ ಹಿರಿಯಡ್ಕ ಘಟಕದ ಅಧ್ಯಕ್ಷ ವಿಜಯ ಮೆಂಡನ್ ಕೊಂಡಾಡಿ, ಸ್ವರ್ಣ ಕಳಸ ನಿರ್ಮಾಣ ಸಮಿತಿ, ಹಿರಿಯಡ್ಕ ಉಪ ಸಮಿತಿಯ ಅಧ್ಯಕ್ಷ ನವೀನ್ ಕೆ. ಮೊದಲಾದವರು ಉಪಸ್ಥಿತರಿದ್ದರು. 

ಬಾಲಕೃಷ್ಣ ಬಿ. ಕೆ. ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಮಂಜುನಾಥ ಮದಗ ವಂದಿಸಿದರು.

 
 
 
 
 
 
 
 
 
 
 

Leave a Reply