ಶ್ರೀರಾಮ ಮಂದಿರ ನಿರ್ಮಾಣಕ್ಕೆ ಜಿಎಸ್ ಬಿ ದೇವಳದ ಒಕೊಟ್ಟದಿಂದ ದೊಡ್ಡ ಮೊತ್ತದ ಕಾಣಿಕೆ ~ ಶ್ರೀಮದ್ ಸಂಯಮಿಂದ್ರ ತೀರ್ಥ ಶ್ರೀಪಾದರು

ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ  ಉಡುಪಿ  ಇದರ 120 ನೇ  ಭಜನಾ ಸಪ್ತಾಹ ಮಹೋತ್ಸವ 
ಅಂಗವಾಗಿ ಬುಧವಾರ ದೇವಳಕ್ಕೆ ಕಾಶೀಮಠಾದೀಶರಾದ  ಹಾಗು ಉಡುಪಿ ಪೇಜಾವರ ಮಠಾಧೀಶರಾದ  ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು  ದೇವಾಲಯಕ್ಕೆ ಭೇಟಿ ನೀಡಿದಾಗ ದೇವಳದ ಧರ್ಮಧರ್ಶಿ ಪಿ.ವಿ.ಶೆಣೈ ಪೂರ್ಣ ಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು. 
 
ಶ್ರೀ ದೇವರ ದರ್ಶನ ಪಡೆದ  ಬಳಿಕ ನೆಡೆದ  ಧಾರ್ಮಿಕ  ಸಭಾ ಕಾರ್ಯಕ್ರಮದಲ್ಲಿ ಉಭಯ ಶ್ರೀಗಳು ಭೇಟಿ ಯಾದರು. ಪೇಜಾವರ ಶ್ರೀಪಾದರು  ಮಾತನಾಡಿ  ಭಜನೆ ಎಲ್ಲರನ್ನೂ ಒಟ್ಟು ಗೂಡಿಸುವ ಶಕ್ತಿಯಾಗಿದ್ದು  ಶ್ರೀ ರಾಮನ ಸೇವೆಯಲ್ಲಿ  ಜಿಎಸ್ ಬಿ ಸಮಾಜ ಮುಂದೆ ಇದೆ. ಈ ಪುಣ್ಯ ಕಾರ್ಯದಲ್ಲಿ  ಕಾಶೀ ಶ್ರೀಗಳ  ಭೇಟಿ  ಅತೀ ಸಂತೋಷ ದಾಯಕವಾಗಿದೆ. ನಮ್ಮ ಗುರುಗಳ ಬಹು ದೊಡ್ಡ ಅಸೆ ಇಂದು ನೆರೆವೇರಿತು. 
 
ಜಿಎಸ್ ಬಿ ದೇವಳದ ಒಕೊಟ್ಟದಿಂದ ದೊಡ್ಡ ಮೊತ್ತದ ಕಾಣಿಕೆ ನೀಡಲು ಸಿದ್ದರಿದ್ದು ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದುದಾಗಿ ಕಾಶೀ ಶ್ರೀಗಳು  ಭರವಸೆ ನೀಡಿದರು. ನಮ್ಮ ಗುರುಗಳು ಈ ಹಿಂದೆ  ಪೇಜಾವರ  ಹಿರಿಯ ಶ್ರೀಗಳು  ಶ್ರೀರಾಮ ಮಂದಿರ ಶಿಲಾ ಇಟ್ಟಿಗೆ  ನೀಡಿ ಸಹಕರಿಸಿದ ಕ್ಷಣ ನೆನಪಿಸಿ ತಾವೂ ಈ ಕಾರ್ಯದಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.
 
ದೇವಳದ ವತಿಯಿಂದ ಉಭಯ ಶ್ರೀಗಳನ್ನು ಗೌರವಿಸಲಾಯಿತು. ಉಡುಪಿ ಶಾಸಕರಾದ ರಘುಪತಿ ಭಟ್, ಮಂಗಳೂರಿನ ಶಾಸಕ  ವೇದವ್ಯಾಸ ಕಾಮತ್ , ಉಡುಪಿ ನಗರ ಪ್ರಾಧಿಕಾರದ ಅದ್ಯಕ್ಪ ರಾಘುವೇಂದ ಕಿಣಿ,  ಮಟ್ಟಾರ್ ವಸಂತ ಕಿಣಿ, ರೋಹಿತಾಕ್ಷ ಪಡಿಯಾರ, ಪುಂಡಲೀಕ ಕಾಮತ್, ಕೈಲಾಶನಾಥ್ ಶೆಣೈ, ನಾರಾಯಣ ಪ್ರಭು , ಉಮೇಶ ಪೈ, ಹಾಗೂ, ಜಿ.ಎಸ.ಬಿ ಮಹಿಳಾ ಮಂಡಳಿಯ ಹಾಗೂ ಯುವಕ ಮಂಡಳಿಯ ಸದಸ್ಯರು ಹಾಗು  ಸಮಾಜ ಬಾಂದವರು ಉಪಸ್ಥರಿದ್ದರು.  
 
 
 
 
 
 
 
 
 
 
 

Leave a Reply