ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಚಪ್ಪರ ಮಹೂರ್ತ

ಮಾ. 25 ರಿಂದ 28 ರ ವರೆಗೆ ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ರಾಶಿ ಪೂಜಾ ಮಹೋತ್ಸವ – ಚಪ್ಪರ ಮಹೂರ್ತ

ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಾರ್ಚ್ 25 ರಿಂದ 28 ರ ವರೆಗೆ 4 ದಿನಗಳ ಕಾಲ “ರಾಶಿ ಪೂಜಾ ಮಹೋತ್ಸವ” ನಡೆಯಲಿದ್ದು, ಆ ಪ್ರಯುಕ್ತ ಇಂದು ದಿನಾಂಕ 17-03-2023 ರಂದು ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಚಪ್ಪರ ಮಹೂರ್ತ ಕಾರ್ಯಕ್ರಮದಲ್ಲಿ ಶಾಸಕರು, ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಗಿರಿಧರ್ ಆಚಾರ್ಯ ಕರಂಬಳ್ಳಿ, ಪ್ರಭಾಕರ್ ಪೂಜಾರಿ, ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಲಕ್ಷ್ಮಣ ಶೇರಿಗಾರ, ಸುಂದರ ಶೆಟ್ಟಿ, ಶೈಲಶ್ರೀ ದಿವಾಕರ್ ಶೆಟ್ಟಿ, ಸ್ಥಳೀಯರಾದ ರಮೇಶ್ ಭಾರೀತಾಯ, ಕಿಶೋರ್ ಕುಮಾರ್, ದಿನೇಶ್ ಅಮೀನ್, ಜಯಕರ ಆಚಾರ್ಯ, ಗಣೇಶ್ ಶೆಟ್ಟಿ, ಪ್ರೇಮಾನಂದ ಆಚಾರ್ಯ, ವಾಸುದೇವ್ ಭಟ್, ತಂತ್ರಿಗಳಾದ ವಾಸುದೇವ್, ಕರಂಬಳ್ಳಿ ಬ್ರಾಹ್ಮಣ ವಲಯ ಸದಸ್ಯರು, ವೆಂಕಟರಮಣ ಭಜನಾ ಮಂಡಳಿ ಸದಸ್ಯರಾದ ಸುಧಾ ಭಟ್, ವಸುಧ ಭಟ್, ಶಿಲ್ಪಾ ಭಟ್, ಜಯಶ್ರೀ ಭಾರೀತಾಯ ಹಾಗೂ ಅರ್ಚಕ ವರ್ಗದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply