ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಬಿಲ್ಲಾಡಿಯ ಕದ್ರಂಜೆಯಲ್ಲಿ 40-50 ವರ್ಷಗಳ ಹಿಂದೆ ಬಿದ್ದು ಹೋಗಿದ್ದ ಪ್ರಾಚೀನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಈಗಾಗಲೇ ಪ್ರಶ್ನ ಚಿಂತನೆಗಳು ನಡೆದು ನವೀಕರಣಾರ್ಥ ಪ್ರಕ್ರಿಯೆಗಳ ಆರಂಭವಾಗಿದೆ.
ಇದೇ ಹೊತ್ತಲ್ಲೇ ನೆಲಸಮವಾಗಿದ್ದ ಗರ್ಭಗುಡಿಯಲ್ಲಿ ಶೋಧ ನಡೆಸಿದಾಗ ಪ್ರಾಚೀನ ಶಿವಲಿಂಗ ಪತ್ತೆಯಾಗುವುದ ರೊಂದಿಗೆ ಮಂದಿರ ಪುನರುತ್ಥಾನ ಕಾರ್ಯಕ್ಕೆ ನವೋತ್ಸಾಹದ ಸ್ಪರ್ಶವಾಗಿದೆ ಎಂದು ಚಿಂತಕ ಕೆ ವಾಸುದೇವ ಭಟ್ ತಿಳಿಸಿದ್ದಾರೆ.