ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜೀರ್ಣೋದ್ಧಾರ ಬಗ್ಗೆ ಫೆಬ್ರವರಿ 21ರ ಭಾನುವಾರ ಸಂಜೆ 4:30 ಕ್ಕೆ ಉಡುಪಿ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಕಡಿಯಾಳಿ ಕಾತ್ಯಾಯನಿ ಮಂಟಪದಲ್ಲಿ ಸಮಸ್ತ ಗ್ರಾಮಸ್ಥರ ಗ್ರಾಮ ಸಭೆ ಕರೆಯಲಾಗಿದೆ.
ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಸಮಗ್ರ ಜೀರ್ಣೋದ್ದಾರ, ಮಾಸ್ಟರ್ ಪ್ಲಾನ್ ರಚನೆ, ಮುಂದಿನ ಕಾರ್ಯವೈಖರಿ, ಪ್ರಮುಖವಾಗಿ ದಿನನಿತ್ಯ ನಡೆಯಲಿರುವ ಕರ ಸೇವೆ, ಜೀರ್ಣೋದ್ದಾರ ಬಗ್ಗೆ ಚರ್ಚೆ ನಡೆಯಲಿದೆ.
ಶಿವಳ್ಳಿ ಗ್ರಾಮದ ಸಮಸ್ತ ನಾಗರೀಕರು ಆಗಮಿಸಬೇಕಾಗಿ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.