ಶ್ರೀ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾ ನದ  ವಾರ್ಷಿಕ ಮಹಾ ರಥೋತ್ಸವ ಸಂಪನ್ನ.

ಉಡುಪಿ: ಕರೋನ ಕಾರಣದಿಂದ ಮುಂದೂಡಲ್ಪಟ್ಟ ಶ್ರೀ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾ ನದ  ವಾರ್ಷಿಕ ಮಹಾ ರಥೋತ್ಸವು ಶನಿವಾರ ಪಾಡಿಗಾರ್ ಶ್ರೀನಿವಾಸ ತಂತ್ರಿಗಳ ಮಾರ್ಗದರ್ಶ ನದಲ್ಲಿ  ಅರ್ಚಕರಾದ ರಘುಪತಿ ಉಪಾಧ್ಯಾಯ ಹಾಗು ಪುರೋಹಿತ  ವೃಂದದೊಂದಿಗೆ ಬೆಳಿಗ್ಗೆ ದುರ್ಗಾ ಹೋಮ , ಪೂರ್ಣಾಹುತಿ , ಮಹಾ ಪೂಜೆ  ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ  ನೆಡೆಯಿತು , ರಾತ್ರಿ ಶ್ರೀ ದೇವರ  ಬಲಿ  ಉತ್ಸವ  ಹಾಗು ಮಹಾರಥೋತ್ಸವ ಜರಗಿತು. 

ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ರವಿರಾಜ ವಿ ಆಚಾರ್ಯ,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಗೇಶ್ ಹೆಗ್ಡೆ,  ನಗರಸಭಾ ಸದಸ್ಯೆ ಗೀತಾ ಶೇಟ್, ನಗರ ಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ ಅಂಚನ್, ವಸಂತ್ ಭಟ್ , ಮಂಜುನಾಥ ಹೆಬ್ಬಾರ್, ದೇವಳದ ಕಾರ್ಯ ನಿರ್ವಹಣಾಧಿಕಾರಿ ಗಣೇಶ್ ರಾವ್, ಗಂಗಾಧರ್,  ಹಾಗು ವ್ಯವಸ್ಥಾಪನಾ ಸಮಿತಿಯ ಸದಸ್ಯರು ಮತ್ತು ನೂರಾರು  ಭಕ್ತಾಭಿಮಾನಿಗಳು ಈ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು 
 
 
 
 
 
 
 
 
 
 
 

Leave a Reply