ಹರಕೆ ಫಲಿಸಿದ್ದಕ್ಕೆ ತಿಮ್ಮಪ್ಪನಿಗೆ 6.5 ಕೆಜಿ ಚಿನ್ನದ ಖಡ್ಗ ಸಲ್ಲಿಸಿದ ದಂಪತಿ

ತಿರುಮಲ: ತಿರುಪತಿ ತಿಮ್ಮಪ್ಪನಿಗೆ ಹೊತ್ತ ಹರಕೆ ಫಲಿಸಿದ್ದಕ್ಕೆ ದಂಪತಿ ಬರೋಬ್ಬರಿ 6.5 ಕೆಜಿ ತೂಕದ ಚಿನ್ನ ಖಡ್ಗ ಸಮರ್ಪಿಸುವ ಮೂಲಕ ತಮ್ಮ ಭಕ್ತಿ ಮೆರೆದಿದ್ದಾರೆ.

ಹೈದರಬಾದ್ ಮೂಲದ ಎಂ.ಶ್ರೀನಿವಾಸ್ ಪ್ರಸಾದ್ ಹಾಗೂ ಅವರ ಪತ್ನಿ ನಂದಕಾ ತಮ್ಮ ವೈಯಕ್ತಿಕ ಸಮಸ್ಯೆಗಾಗಿ ತಿರುಪತಿ ತಿಮ್ಮಪ್ಪನ ಬಳಿ ಹರಕೆ ಹೊತ್ತಿದ್ದರಂತೆ.ಹರಕೆ ಫಲಿಸಿದ್ದಕ್ಕೆ ಖುಷಿಯಾದ ದಂಪತಿ ಬರೋಬ್ಬರಿ 6.5 ಕೆಜಿ ತೂಕದ ಚಿನ್ನದ ಖಡ್ಗವನ್ನು ತಿಮ್ಮಪ್ಪನಿಗೆ ಸಲ್ಲಿಸಿದ್ದಾರೆ.

 ಎಂ.ಶ್ರೀನಿವಾಸ್ ಪ್ರಸಾದ್ ಕಳೆದ ವರ್ಷವೇ ಈ ಹರಕೆ ಸಲ್ಲಿಸೋದಿಕ್ಕೆ ಸಿದ್ಧವಾಗಿದ್ದರಂತೆ. ಆದರೆ ಕೊರೋನಾದಿಂದಾಗಿ ದೇವಾಲಯಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ಈಗ ದೇವಾಲಯದ ಆಡಳಿತ ಮಂಡಳಿಗೆ ತಮ್ಮ ಹರಕೆ ಸಮರ್ಪಿಸಿ ದೇವರ ದರ್ಶನ ಪಡೆದಿದ್ದಾರೆ.ತಿರುಪತಿಗೆ ಸಲ್ಲಿಕೆಯಾದ ಈ ಹರಕೆಯ ಖಡ್ಗದ ಬೆಲೆ ಅಂದಾಜು 4 ಕೋಟಿ ರೂಪಾಯಿ. ಪ್ರತಿವರ್ಷವೂ ತಿರುಪತಿಗೆ ಈ ರೀತಿ ಚಿನ್ನದ ಹರಕೆ ಸಲ್ಲಿಕೆಯಾಗುವುದು ಸಹಜ.

 
 
 
 
 
 
 
 
 
 
 

Leave a Reply