ಭಜನೆ ಭಕ್ತನಿಗೂ, ಭಗವಂತನಿಗೂ ನೇರ ಸಂಪರ್ಕದ ಸೇತುವೆ~ಪೇಜಾವರ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ   

ಭಗವಂತನ ಅನುಗ್ರಹದಿಂದ ಸಂಕಷ್ಟ ದೂರ. ಪವಿತ್ರ ಪುಣ್ಯಭೂಮಿಯಾಗಿರುವ ಸೂರಿ ಮಣ್ಣಿನಲ್ಲಿ ನಿರಂತರವಾಗಿ ಭಗವಂತನ ಸೇವೆ ನಡೆಯುತ್ತಿದೆ.  ಭಗವಂತನ ಅನುಗ್ರಹದಿಂದ ಸಕಲರ ಸಂಕಷ್ಟಗಳು ದೂರವಾಗಲಿ ಎಂದು  ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡಿದರು. 
ಶಿವಪುರ ಸೂರಿಮಣ್ಣು ಮಠದ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಇತ್ತೀಚೆಗೆ ಆಯೋಜಿಸಲಾದ ಭಜನಾ ಮಂಗಲೋತ್ಸವ, ವಾದಿರಾಜ ಗುರುಸಾರ್ವಭೌಮರ ಜನ್ಮದಿನೋತ್ಸವ ಹಾಗು ಲಕ್ಷ್ಮೀ
ನಾರಾಯಣ ಮಹಿಳಾ ಭಜನಾ ಮಂಡಳಿಯ ಶುಭಾರಂಭ ಮತ್ತು ಶ್ರೀಮಠದ ವರ್ಧಂತಿ ಕಾರ್ಯ
ಕ್ರಮವನ್ನು ಉದ್ಘಾಟಿಸಿ ಭಜನೆ ಭಕ್ತನಿಗೂ, ಭಗವಂತನಿಗೂ ನೇರ ಸಂಪರ್ಕದ ಸೇತುವೆ. ಭಜನೆ ಯಿಂದ  ದೇವರು ಸದಾ ನಮ್ಮೊಂದಿಗೆ ಇರುತ್ತಾರೆ  ಎಂದರು
ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಕುಣಿತ ಭಜನೆ, ಬಳಿಕ ಮಂಗಲೋತ್ಸವ, ರಂಗಪೂಜೆ ಹಾಗು  ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು ವಿವಿಧ ಗಣ್ಯರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಸ್ಥಳೀಯ ಪ್ರಮುಖರು, ಭಜನಾ ಮಂಗಲೋತ್ಸವ ದಲ್ಲಿ ಭಾಗವಹಿಸಿದರು. 
ಶ್ರೀಮಠದ ಮುಖ್ಯಸ್ಥ ಸೂರಿಮಣ್ಣು ಸದಾಶಿವ್ ಉಪಾಧ್ಯಾಯ, ಸೂರಿಮಣ್ಣು ರವಿರಾಜ್ ಉಪಾಧ್ಯಾಯ,  ನಾಗರಾಜ ಉಪಾಧ್ಯಾಯ, ಲಕ್ಶ್ಮೀನಾರಾಯಣ ಭಟ್ ಮುಂತಾದವರು ಉಪಸ್ಥಿತರಿದ್ದರು. 
 
 
 
 
 
 
 
 
 
 
 

Leave a Reply