ಅಂಬಲಪಾಡಿ ದೇವಳದಿಂದ ಉಡುಪಿ ತಾಲೂಕಿನ 161ಸಿ ದರ್ಜೆಯ ದೇವಸ್ಥಾನಗಳಿಗೆ 4ಲಕ್ಷ ಮೌಲ್ಯದ ಕಿಟ್ ಹಸ್ತಾಂತರ

ಉಡುಪಿ: ಇಲ್ಲಿನ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ವತಿಯಿಂದ ಉಡುಪಿ ತಾಲೂಕಿನ 161ಸಿ ದರ್ಜೆಯ ದೇವಸ್ಥಾನಗಳ 208 ಸಿಬಂದಿಗಳಿಗೆ ಸುಮಾರು 4 ಲಕ್ಷ ರೂ. ವೆಚ್ಚದ ಆಹಾರ ಕಿಟ್ ನ್ನು ​(ಅಗತ್ಯವಿರುವ 16 ವಸ್ತುಗಳ)  ದೇವಳದ ಧರ್ಮದರ್ಶಿ ​ನಿಡಂಬೂರು ಬೀಡು ಡಾ.ವಿಜಯ ಬಲ್ಲಾಳ್ ಮಂಗಳವಾರ ತಾಲೂಕು ಕಚೇರಿ​ಯ ಕಂದಾಯ ಅಧಿಕಾರಿ ಉಪೇಂದ್ರ ಅವರಿಗೆ ಹಸ್ತಾಂತರಿಸಿದರು.​​

ಕಳೆದ ವರ್ಷ ಸರ್ಕಾರಿ ಅಧಿಕಾರಿಗಳು, ಶಾಸಕ ಮತ್ತು ಸಚಿವರ ಸೂಚನೆ ಮೇರೆಗೆ ಬಡಜನರಿಗೆ 4 ಸಾವಿರ ಆಹಾರ ಕಿಟ್, ಒಂದು ತಿಂಗಳ ಕಾಲ ವಲಸೆ ಕಾರ್ಮಿಕರು, ಕೆಲವು ಆಸ್ಪತ್ರೆಯ ಸೋಂಕಿತ ರೋಗಿಗಳು ಮತ್ತು ಜಿಲ್ಲಾಸ್ಪತ್ರೆ ಸಿಬಂದಿಗಳಿಗೆ ಪ್ರತಿದಿನ 2,500 ಊಟ ನೀಡಲಾಗಿತ್ತು ಎಂದು ಡಾ. ಬಲ್ಲಾಳ್ ತಿಳಿಸಿದರು.

​ಈ ಸಂದರ್ಭದಲ್ಲಿ ​ಅಂಬಲಪಾಡಿ ಗ್ರಾಮಕರಣಿಕ ಅಭಿಷೇಕ್, ಸಹಾಯಕ ಅಶೋಕ್ ​ಉಪಸ್ಥಿತರಿದ್ದರು.  ​​

 
 
 
 
 
 
 
 
 
 
 

Leave a Reply