ಜನ ಸೇರುವ ಸಂತೆಯಲ್ಲಿ ಇಂದು ಯಾರಿಲ್ಲ…ಏ ಕೆ?~ಕ್ಲಿಕ್ : ಅಶೋಕ್ ದೊಡ್ಡೇರಂಗಡಿ

ಜನ ಸೇರುವ ಸಂತೆಯಲ್ಲಿ
ಇಂದು ಯಾರಿಲ್ಲ…ಏಕೆ?
ಕನಸುಗಳ ಹೊತ್ತು ಕೂತವನ
ಮನದ ಆಸೆಗಳೆಲ್ಲವೂ ಭಿಕಾರಿ..

ಸಂಜೆಯ ಊಟ..
ಮಗಳ ಆನ್ಲೈನ್ ಪೀಸು..
ಮಗನ ಸೈಕಲ್ ಕನಸು..
ಹಬ್ಬಕ್ಕೆ ಹೆಂಡತಿಗೊಂದು ಸೀರೆ..

ಅಯ್ಯೋ…! ಇರಲಿ ಬಿಡಿ…

ಈಗ ಜೋಳದ ಜೊತೆ
ಜೋಳಿಗೆ ಕನಸುಗಳೂ
ಮಾರಾಟಕ್ಕಿವೆ….!!

📝ಅಶೋಕ್ ದೊಂಡೇರಂಗಡಿ

 
 
 
 
 
 
 
 
 
 
 

Leave a Reply