ಯುವಮೋರ್ಚಾ ವತಿಯಿಂದ “ಯುವ ಹಸಿರು” ಕಾರ್ಯಕ್ರಮ   

ಭಾರತೀಯ ಜನತಾ ಪಾರ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವಮೋರ್ಚಾ ಹಮ್ಮಿಕೊಡಿರುವ “ಯುವ ಹಸಿರು” ಕಾರ್ಯಕ್ರಮ ಕೋಟೇಶ್ವರ  ಮಹಾಶಕ್ತಿಕೇಂದ್ರ ವ್ಯಾಪ್ತಿಯ ಬಸ್ರೂರು ಶ್ರೀ ದೇವಿ ದೇವಸ್ಥಾನದ ವಠಾರದಲ್ಲಿ ಇಂದು ನಡೆಯಿತು.  ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆಯವರು  ಗಿಡ ನಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ  ನೀಡಿದರು.

ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಗೋಪಾಡಿ,ಸತೀಶ್ ಪೂಜಾರಿ ವಕ್ವಾಡಿ, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು,ಯುವಮೋರ್ಚಾ ಜಿಲ್ಲಾ ಪ್ರಮುಖ ವಿನೋದ್ ರಾಜ್ ಶಾಂತಿನಿಕೇತನ್, ಕುಂದಾಪುರ ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು,  ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಸ್ರೂರು ಕಿಶನ್ ಹೆಗ್ಡೆ, ಕೋಟೇಶ್ವರ ಮಹಾಶಕ್ತಿಕೇಂದ್ರ ಅಧ್ಯಕ್ಷ ಕೃಷ್ಟ ಗೊಲ್ಲ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ  ಚೇತನ್ ಬಂಗೇರ , ಸುನಿಲ್ ಖಾರ್ವಿ, ಕಾರ್ಯದರ್ಶಿಗಳಾದ ಸಂತೋಷ್ ಪೂಜಾರಿ, ಅರುಣ್ ಕುಮಾರ್, ದೀಕ್ಷಿತ್ ಶೆಟ್ಟಿ , ಕುಶ ಪೂಜಾರಿ, ಬಸ್ರೂರು ಪಂಚಾಯತ್ ಅಧ್ಯಕ್ಷ ನಾಗರಾಜ್ ಸಂತೆಕಟ್ಟೆ,

 

ಮಾಜಿ ಸದಸ್ಯ ಮಹೇಶ್ ಮೆಂಡನ್,   ಕೋಟೇಶ್ವರ ಮಹಾಶಕ್ತಿ ಕೇಂದ್ರ  ಯುವಮೋರ್ಚಾ ಅಧ್ಯಕ್ಷ ವಿವೇಕ್ ದೇವಾಡಿಗ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ  ಮನೋಜ್ ರೈತ ಮೋರ್ಚಾ ಅಧ್ಯಕ್ಷ ಸುನಿಲ್ ಶೆಟ್ಟಿ ಹೇರಿಕುದ್ರು, ಹಾಗೂ ಪಕ್ಷದ ಮುಖಂಡರಾದ ಅಶೋಕ ಕೆರೆಕಟ್ಟೆ, ಬಸ್ರೂರು ಸುರೇಶ್ ನಾಯಕ್, ಸ್ಥಳಿಯ ಪ್ರಮುಖ ದಾಮೂಜಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.  200 ಸಸಿಗಳನ್ನು ನೆಡಲಾಯಿತು

 
 
 
 
 
 
 
 
 
 
 

Leave a Reply