ರೂ. 20 ಲಕ್ಷ ಅನುದಾನದಲ್ಲಿ ಬ್ರಾಹ್ಮಿ ಸಭಾಭವನ ಬಳಿ ರಸ್ತೆ ಕಾಂಕ್ರೇಟಿಕರಣ

ಉಡುಪಿ ವಿಧಾನಸಭಾ ಕ್ಷೇತ್ರದ ನಗರಸಭಾ ವ್ಯಾಪ್ತಿಯ ಗುಂಡಿಬೈಲು ವಾರ್ಡ್ ಬ್ರಾಹ್ಮಿ ಸಭಾಭವನ ಬಳಿಯ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕರ  ಶಿಫಾರಸ್ಸಿನ ಮೇರೆಗೆ ನಗರೋತ್ಥಾನ ನಿಧಿಯಿಂದ ರೂ. 20.00 ಲಕ್ಷ ಅನುದಾನ ಮಂಜೂರಾಗಿದ್ದು, ಶಾಸಕ ಕೆ. ರಘುಪತಿ ಭಟ್ ರವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷರಾದ ಚೈತನ್ಯ ಎಂ. ಜಿ, ಕಾರ್ಯದರ್ಶಿಗಳಾದ ವಿವೇಕಾನಂದ, ಕೋಶಾಧಿಕಾರಿಗಳಾದ ಕುಮಾರಸ್ವಾಮಿ ಉಡುಪ, ಕೆ.ಎಂ.ಉಡುಪ ನೀಲಾವರ, ವೈ. ಮಂಜುನಾಥ್ ರಾವ್, ಪ್ರವೀಣ್ ಉಪಾಧ್ಯ, ವಿಷ್ಣು ಎಂ. ಎಸ್ ಬೈಲೂರ್, ಚಂದ್ರಕಾಂತ್ ಕೆ ಎನ್, ಅರ್ಚಕ ಮೂಡುಬೆಟ್ಟು ರಮೇಶ್ ಭಟ್ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ನಿಕಟಪೂರ್ವ ಅಧ್ಯಕ್ಷ ವಿಷ್ಣು ಪ್ರಸಾದ್ ಪಾಡಿಗಾರ್ ಸ್ವಾಗತಿಸಿ, ಧನ್ಯವಾದ ನೀಡಿದರು.

 
 
 
 
 
 
 
 
 
 
 

Leave a Reply