ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಪ್ರಯುಕ್ತ ಬ್ರಾಹ್ಮೀ ಸಭಾಭವನದ ಮುoಭಾಗದಲ್ಲಿ ಧ್ವಜಾರೋಹಣ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತೀಯ ವಾಯುಸೇನೆಯ ನಿವೃತ್ತ ಯೋಧ ಕೆ. ಶಿವರಾಮ ಮಂಜ ರವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷರುಗಳಾದ ರಂಜನ್ ಕಲ್ಕೂರಾ, ಎಂ ಎಸ್. ವಿಷ್ಣು, ಶಶಿಧರ್ ಭಟ್, ವಿಷ್ಣುಪ್ರಸಾದ್ ಪಾಡಿಗಾರ್ ಮತ್ತಿತರರು ಉಪಸ್ಥಿತರಿದ್ದರು. ಕೆ. ವಾಸುದೇವ ಐತಾಳ ಇವರಿಂದ ದೇಶಭಕ್ತಿ ಗೀತ ಗಾಯನ ನಡೆಯತು. ಅಧ್ಯಕ್ಷ ಚೈತನ್ಯ ಎಂ ಜಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ವಿವೇಕಾನಂದ ಪಾಂಗಣ್ಣಾಯ ವಂದಿಸಿದರು.