ಸೌರಮಾನ ಯುಗಾದಿ ಸಂಭ್ರಮಾಚರಣೆ *

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಸೌರಮಾನ ಯುಗಾದಿ ಆಚರಣೆ ಪ್ರಯುಕ್ತ SMSP ಸಂಸ್ಕೃತ ಕಾಲೇಜಿನ ದ್ವೈತ ವೇದಾಂತ ವಿಭಾಗದ ಪ್ರಾಧ್ಯಾಪಕರಾದ ಡಾ | ಷಣ್ಮುಖ ಹೆಬ್ಬಾರ್ ಇವರಿಂದ ಪಂಚಾಂಗ ಪೂಜೆ ಹಾಗೂ ಶುಭಕೃತ್ ನಾಮ ಸಂವತ್ಸರದ ಪಂಚಾಂಗ ಶ್ರವಣ ಹಾಗೂ ವಿಶೇಷ ಧಾರ್ಮಿಕ ಉಪಾನ್ಯಾಸ ವನ್ನು ‘ಬ್ರಾಹ್ಮಿ ಸಭಾ ಭವನ’ ದಲ್ಲಿ ಏರ್ಪಡಿಸಲಾಯಿತು. ಮೊದಲಿಗೆ ಪರಿಷತ್ತಿನ ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು . ಶ್ರೀ ರಮೇಶ್ ಭಟ್ ಮೂಡುಬೆಟ್ಟು ಇವರು ಕೊಡಮಾಡಿದ ಗೋಗ್ರಾಸ ಹುಂಡಿಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಇತ್ತೀಚಿಗೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಷತ್ತಿನ ಸದಸ್ಯರಾದ ಡಾ ಶೈಲೇಶ್ ಭಟ್ ಹಾಗೂ ಡಾ ಸ್ವರೂಪ್ ವಿ ಇವರನ್ನು ಗೌರವಿಸಲಾಯಿತು. ಧಾರ್ಮಿಕ ಉಪನ್ಯಾಸವನ್ನು ನಡೆಸಿ ಕೊಟ್ಟ ಡಾ | ಷಣ್ಮುಖ ಹೆಬ್ಬಾರ್ ಇವರನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು. ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಎಂ ಜಿ ಸ್ವಾಗತಿಸಿ ನಿರೂಪಿಸಿದರು. ಕಾರ್ಯದರ್ಶಿ ವಿವೇಕಾನಂದ ಏನ್ ವಂದನಾರ್ಪಣೆ ಗೈದರು.

 
 
 
 
 
 
 
 
 
 
 

Leave a Reply