ಧಾರ್ಮಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಗುಂಡಿಬೈಲು ಬ್ರಾಹ್ಮಿ ಸಭಾಭವನದಲ್ಲಿ 08.01.2023 ರಂದು ಹಮ್ಮಿಕೊಳ್ಳಲಾದ 25ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಲಕ್ಷ್ಮಿ ಹೃದಯ ಹೋಮ ಹಾಗೂ ಪೂರ್ವಭಾವಿಯಾಗಿ 01.01. 2023 ರಿಂದ 07.01.2023 ರ ವರೆಗೆ ಪ್ರತಿದಿನ ಸಂಜೆ ನಡೆಯುವ ವಿದ್ವಾಂಸರಿಂದ ಪ್ರವಚನ, ಪರಿಸರದ ವಿಪ್ರ ವಲಯಗಳಿಂದ ಭಜನೆ, ಸಂಕೀರ್ತನೆ ಮುಂತಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿಯುಳ್ಳ ಆಮಂತ್ರಣ ಪತ್ರಿಕೆಯನ್ನು ಪರಿಷತ್ತಿನ ಆಶ್ರಯದಾತರಾದ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಎಂ.ಜಿ., ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಎನ್., ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಹಾಗೂ ಪದಾಧಿಕಾರಿಗಳಾದ ವಿಷ್ಣುಪ್ರಸಾದ್ ಪಾಡಿಗಾರ್, ಕೆ. ರಘುಪತಿ ರಾವ್,ರವೀಂದ್ರ ಆಚಾರ್ಯ, ಸುರೇಶ್ ಕಾರಂತ್, ರಾಜಗೋಪಾಲ್ ಭಟ್, ಶ್ರೀಪತಿ ಉಪಾಧ್ಯಾಯ ಪ್ರವೀಣ ಉಪಾಧ್ಯಾಯ, ಸುಮಿತ್ರ ಕರೆಮಠ ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply