ಭಗವತೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ
ಭಗವತೀ ಯಕ್ಷ ಕಲಾ ಬಳಗ (ರಿ.) ಆಶ್ರಯದಲ್ಲಿ ನವರಾತ್ರಿ
ಮಹೋತ್ಸವದ ಅಂಗವಾಗಿ 26-09-2022ರಿಂದ 05-10-2022ರ ವರೆಗೆ
ಪುತ್ತೂರು ಶ್ರೀ ದುರ್ಗಾಪರಮೇಶ್ವರೀ ದೇವಳದ ಆವರಣದಲ್ಲಿ
ನಡೆಯುವ 15 ಹವ್ಯಾಸಿ ಯಕ್ಷಗಾನ ತಂಡಗಳ ಯಕ್ಷಗಾನ
ಪ್ರದರ್ಶನ ಮತ್ತು ಸುಪ್ರಸಿದ್ಧ ವೃತ್ತಿಪರ ಕಲಾವಿದರಿಂದ
ಒoದು ಯಕ್ಷಗಾನ ಪ್ರದರ್ಶನದ ಯಕ್ಷನವಮಿ-2022
ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವಿಗೆ ಪುತ್ತೂರು ಶ್ರೀಶ
ಭಟ್ ಇವರ ಪ್ರಾರ್ಥನೆಯೊಂದಿಗೆ ಬಿಡುಗಡೆಗೊಳಿಸಲಾಯಿತು.
ಸಮಾರಂಭದಲ್ಲಿ ಅಧ್ಯಕ್ಷರಾದ ಪ್ರಮೋದ್ ತಂತ್ರಿ,
ಉಪಾಧ್ಯಕ್ಷರಾದ ಪ್ರೊ. ಸುಬ್ರಹ್ಮಣ್ಯ ಜೋಶಿ, ಕಾರ್ಯದರ್ಶಿ
ರಘುನಾಥ ಮಾಬೆನ್, ಕೋಶಾಧಿಕಾರಿ ಚೈತನ್ಯ ಎಂ.ಜಿ. ಹಾಗೂ
ಸದಸ್ಯರಾದ ನಾಗೇಂದ್ರ ಭಟ್ ಉಪಸ್ಥಿತರಿದ್ದರು.