ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ (Welfare party of india) ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಬೇಕೆಂದು ದೇಶಾದ್ಯಂತ ಅಭಿಯಾನವನ್ನು ಹಮ್ಮಿಕೊಂಡಿದ್ದು ಉಡುಪಿ ಜಿಲ್ಲೆಯಲ್ಲಿ ಅಭಿಯಾನದ ಮೂಲಕ ಸಾವಿರಾರು ಸಹಿಸಂಗ್ರಹ ಅಭಿಯಾನವನ್ನೂ ಹಮ್ಮಿಕೊಳ್ಳಲಾಯಿತು . ದೇಶದಲ್ಲಿ 4,88,511 ರಾಜಕೀಯ ಕೈದಿಗಳಿದಗದಾರೆಂದು . ಅದರಲ್ಲೂ 80% ಅಂದರೆ 3,71,848 ವಿಚಾರಣದೀ (Under trail) ಕೈದಿಗಳಿದ್ದಾರೆಂದು National crime report ಹೇಳುತ್ತಿದೆ.ಇವರು ಯಾವುದೇ ಸ್ವಾರ್ಧವಿಲ್ಲದೆ ದೇಶದ ,ನಾಗರೀಕರ ಪರ ಮತ್ತು ಸಂವಿಧಾನಕ್ಕೆ ವಿರುದ್ದವಾದ ಪ್ರಭುತ್ವದ ನೀತಿಗಳ ವಿರುಧ್ದ ತನ್ನ ಅಭಿಪ್ರಾಯವನ್ನು ಮಂಡಿಸಿರುತ್ತಾರೆ ,ಮರ್ಧಿತರ ,ಆದಿವಾಸಿಗಳ ದ್ವನಿಯಾಗಿ, ಮತ್ತು ದೇಶದ ನೈಸರ್ಗಿಕ ಸಂಪತ್ತಿನ ರಕ್ಷಣೆಗಾಗಿ ಹೋರಾಡಿದವರಾಗಿದ್ದಾರೆ .ಇವರ ಬಿಡುಗಡೆಗಾಗಿ ರಾಷ್ಟಪತಿಗಳು ಕೂಡಲೇ ಮದ್ಯ ಪ್ರವೇಶಿಸಿ ಬಿಡುಗಡೆಗಿಳಿಸಬೇಕೆಂದು ಉಡುಪಿ ಜಿಲ್ಲೆಯಾದ್ಯಂತ ಸಹಿಸಂಗ್ರಹ ಮತ್ತು ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು ಮತ್ತು ಪಕ್ಷದ ವತಿಯಿಂದ ಉಡುಪಿ ಜಿಲ್ಲಾಧಿಕಾರಿಯ ಮೂಲಕ ರಾಷ್ಟಪತಿಗಳಿಗೆ ಸಹಿ
ಸಂಗ್ರಹ & ಮನವಿಯನ್ನು ಕಳಿಸಲಾಯಿತು .ನಿಯೋಗದಲ್ಲಿ ಉಡುಪಿ ಜಿಲ್ಲಾ ಅದ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ, ಉಪಾಧ್ಯಕ್ಷ ಶಹಜಹಾನ್ ತೋನ್ಸೆ, ರಿಯಾಝ್ ಅಹಮದ್ ,ಅಬ್ದುಲ್ ರಝ್ಝಾಕ್ ,ಅಬ್ದುಲ್ ಖಾದರ್ ಉಪಸ್ದಿತರಿದ್ದರು